More

    ಹಲ್ಲೆ ಅಪರಾಧಿಗಳಿಗೆ ಕಠಿಣ ಸಜೆ

    ಚಿತ್ರದುರ್ಗ: ಮನೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳಿಂದ ಎದುರಾಳಿಗಳ ಮೇಲೆ ತೀವ್ರ ಹಲ್ಲೆ ನಡೆಸಿ ಪ್ರಾಣ ಬೆದರಿಕೆಯೊಡ್ಡಿದ್ದ ಅಪರಾಧಿಗಳಿಬ್ಬರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ವರ್ಷ ಕಠಿಣ ಸಜೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
    ಗವಿಸಿದ್ದಪ್ಪ ಹಾಗೂ ಕರಿಚಿತ್ತಪ್ಪ ಶಿಕ್ಷೆಗೆ ಗುರಿಯಾದವರು. ಮೊಳಕಾಲ್ಮೂರು ತಾಲೂಕು ಹೊಸಹಳ್ಳಿ ಎಳ್ಳೆನಾಗಪ್ಪ ಹಾಗೂ ಹಲ್ಲೆ ನಡೆಸಿದವರ ನಡುವೆ ಮನೆ ಜಾಗದ ವ್ಯಾಜ್ಯವಿತ್ತು. ಈ ವಿಚಾರ ಮೊಳಕಾಲ್ಮೂರು ನ್ಯಾಯಾಲಯದ ಮೆಟ್ಟಿಲೇರಿತ್ತು.
    ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಗವಿಸಿದ್ದಪ್ಪ, ಕರಿಚಿತ್ತಪ್ಪ, ಗೋಪಾಲ, ಚಿಕ್ಕನಾಗಮ್ಮ ಅವರು, ಎಳ್ಳೆನಾಗಪ್ಪ, ಕೃಷ್ಣಪ್ಪ ಮತ್ತಿತರರ ಮೇಲೆ 2019 ಮೇ 7ರಂದು ರಾತ್ರಿ ಹಲ್ಲೆ ನಡೆಸಿ ಪ್ರಾಣ ಬೆದರಿಕೆಯೊಡ್ಡಿದ್ದರು ಎಂದು ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ಪಿಎಸ್‌ಐ ಎ.ಕಿರಣ್‌ಕುಮಾರ್ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಗೀತಾ ಅವರು ತೀರ್ಪು ನೀಡಿದರು. ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಗೋಪಾಲ ಮತ್ತು ಚಿಕ್ಕನಾಗಮ್ಮ ಅವರನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಬಿ. ಗಣೇಶ ನಾಯ್ಕ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts