More

    ಹದಗೆಟ್ಟು ಹೋಗಿದೆ ಯಳವತ್ತಿ-ಮಾಗಡಿ ರಸ್ತೆ!

    ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ-ಮಾಗಡಿ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ವಣವಾಗಿದೆ.

    ಶಿರಹಟ್ಟಿಯಿಂದ ಯಳವತ್ತಿ ಮಾರ್ಗವಾಗಿ ಹುಬ್ಬಳ್ಳಿ ಸಂರ್ಪಸುವ, ಯಳವತ್ತಿಯಿಂದ ಮಾಗಡಿ ಮಾರ್ಗವಾಗಿ ಲಕ್ಷ್ಮೇಶ್ವರ ಸಂರ್ಪಸುವ ಈ ಪ್ರಮುಖ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿವೆ. ಯಳವತ್ತಿಯಿಂದ ಮಾಗಡಿವರೆಗಿನ 4 ಕಿಮೀ ರಸ್ತೆಯಲ್ಲಿ 2 ಕಿಮೀ ರಸ್ತೆಯಂತೂ ಸಂಪೂರ್ಣ ಹಾಳಾಗಿದೆ.

    ಇತ್ತೀಚೆಗೆ ಈ ರಸ್ತೆಯಲ್ಲಿ ಬೈಕ್ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸತತ ಮಳೆಯಿಂದಾಗಿ ರಸ್ತೆಯಲ್ಲಿನ ಗುಂಡಿಯಲ್ಲಿ ನೀರು ನಿಂತಿರುತ್ತದೆ. ಸಂಬಂಧಿಸಿದ ಇಲಾಖೆಯವರು ಕೂಡಲೇ ಈ ರಸ್ತೆಗೆ ಕಾಯಕಲ್ಪ ನೀಡದಿದ್ದಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರಾದ ಸುರೇಶ ಬೀರಣ್ಣವರ, ಶಿವಯೋಗಿ ಹೊಸಕೇರಿ, ನಿಂಗಪ್ಪ ಚಿನಗಿ, ನಾಗಪ್ಪ ಹೂಗಾರ, ಮಂಜುನಾಥ ನಿಮ್ಮನಾಯ್ಕರ್, ಬಾಬುಗೌಡ ಪಾಟೀಲ ಆಗ್ರಹಿಸಿದ್ದಾರೆ.

    ಮಾಗಡಿ- ಯಳವತ್ತಿ ರಸ್ತೆ ಸೇರಿ ಲಕ್ಷೆ್ಮೕಶ್ವರ, ಶಿರಹಟ್ಟಿ ತಾಲೂಕುಗಳ ಅನೇಕ ರಸ್ತೆಗಳ ಅಭಿವೃದ್ಧಿಗೆ ಅಂದಾಜುಪಟ್ಟಿ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು.

    | ನರೇಂದ್ರ ಡಿ.ಬಿ. ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts