ಉಳ್ಳಾಲ: ಮುನ್ನೂರು ಗ್ರಾಮದ ಕುತ್ತಾರ್ ಸಮೀಪದ ಮದನಿ ನಗರ ಹೋಟೆಲ್ನಲ್ಲಿ ಆರ್ಡರ್ ಮಾಡಿದ ಆಹಾರದ ಹಣ ಕೇಳಿದ್ದರಿಂದ ಆಕ್ರೋಶಗೊಂಡ ತಂಡವೊಂದು ದಾಂಧಲೆ ನಡೆಸಿದೆ.
ಭಾನುವಾರ ರಾತ್ರಿ 9 ಗಂಟೆ ಹೊತ್ತಿಗೆ ಆರೋಪಿಗಳಾದ ಲುಕ್ಮಾನ್, ಅಝ್ಮಲ್, ರಿಝ್ವನ್, ಇಮ್ರಾನ್, ಫವಾಝ್, ನಿಝಾಮ್, ಇರ್ಫಾನ್, ತೌಫಿಕ್ ಎಂಬುವರು ಇಲ್ಲಿನ ಹೋಟೆಲೊಂದಕ್ಕೆ ಹೋಗಿ ತಿಂಡಿಗೆ ಆರ್ಡರ್ ಮಾಡಿದ್ದರು. ಆ ಸಂದರ್ಭ ಕೌಂಟರ್ನಲ್ಲಿದ್ದ ಸತೀಶ್ಚಂದ್ರ ಈ ಬಾರಿಯ ಹಣ ಕೊಡಿ ಎಂದು ವಿನಂತಿಸಿದ್ದಾರೆ.
ಅಷ್ಟರಲ್ಲಿ ಸಿಟ್ಟುಗೊಂಡ ಆರೋಪಿಗಳು ಕಲ್ಲು, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಸತೀಶ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ಕಿಟಕಿ, ಪಾತ್ರೆ, ಮೇಜು, ಕುರ್ಚಿಗಳಿಗೆ ಹಾನಿಗೈದಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ. ಘಟನೆಯಲ್ಲಿ ಸುಮಾರು 20 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಫೈಝಲ್ ಪಿ.ಕೆ. ಎಂಬುವರು ನೀಡಿದ ದೂರಿನ ಜತೆ ಕೋವಿಡ್ ನಿಯಾಮಾವಳಿ ಉಲ್ಲಂಘಿಸಿದ ಬಗೆಯೂ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.