ಕಾರವಾರ: ಸೈಕ್ಲಿಂಗ್ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಿದ್ಧಿಸಿಕೊಳ್ಳುವ ಜತೆಗೆ ಪರಿಸರ ಸಂರಕ್ಷಣೆಯನ್ನೂ ಮಾಡಬಹುದು ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಳ ನಿರ್ದೇಶಕ ಆರ್. ಸತ್ಯನಾರಾಯಣ ಹೇಳಿದರು.
ಫೀಟ್ ಇಂಡಿಯಾ ಕಾರ್ಯಕ್ರಮದಡಿ ನೆಹರು ಯುವ ಕೇಂದ್ರ ಹಾಗೂ ಎನ್ಪಿಸಿಐಎಲ್ನಿಂದ ಡಿ.21 ರವರೆಗೆ ಆಯೋಜಿಸಿರುವ ಸೈಕ್ಲೊಥಾನ್ ಚಾಲೆಂಜ್ಗೆ ಸೋಮವಾರ ನಗರದ ಎಂ.ಜಿ.ರಸ್ತೆಯಿಂದ ಚಾಲನೆ ನೀಡಿ ಮಾತನಾಡಿದರು.
ಕರೊನಾ ಲಾಕ್ಡೌನ್ ಕಾರಣ ಹಲವರು ದೈಹಿಕ ಶ್ರಮವಿಲ್ಲದೆ ಸ್ಥೂಲ ಕಾಯ ಬೆಳೆಸಿಕೊಂಡಿದ್ದಾರೆ. ಸೈಕ್ಲಿಂಗ್ ಮೂಕಲ ಬೊಜ್ಜು ಕರಗಿಸಬಹುದು. ಹೃದಯಕ್ಕೆ, ಮಾಂಸಖಂಡ ಹಾಗೂ ಕೀಲುಗಳ ಆರೋಗ್ಯಕ್ಕೂ ಸೈಕ್ಲಿಂಗ್ ಉತ್ತಮ ಎಂದರು.
50 ರಷ್ಟು ಜನ ಸೈಕ್ಲಿಂಗ್ನಲ್ಲಿ ಭಾಗವಹಿಸಿದ್ದರು. ಕೈಗಾದ ಅಧಿಕಾರಿಗಳಾದ ಆರ್.ವಿ. ಮನೋಹರ, ಜಗನ್ಜೆ. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಯಶವಂತ ಯಾದವ, ಅಕೌಂಟೆಂಟ್ ಮೀರಾ ನಾಯ್ಕ, ಕಾರ್ಯಕರ್ತರಾದ ಪೂಜಾ ಕಳಸ, ಪರಸಪ್ಪ ಹೊನ್ನೂರ್, ಅನಿಲ ರೇವಣಕರ್ ಇದ್ದರು.