More

    ಸೀಟು ಹಿಡಿಯಲು ಹೋಗಿ ಬಸ್ ಚಕ್ರದಡಿಗೆ ಸಿಲುಕಿದ ಶಿಕ್ಷಕ

    ಇಳಕಲ್ಲ (ಬಾಗಲಕೋಟೆ ಜಿಲ್ಲೆ): ಸೀಟು ಹಿಡಿಯುವ ಆತುರದಲ್ಲಿ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ಬಸ್ ಏರಲು ಹೋಗಿ ಕಾಲು ಜಾರಿ ಬಿದ್ದು ಬಸ್‌ನ ಗಾಲಿಯಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಳಕಲ್ ಬಸ್ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
    ಗಾಯಗೊಂಡಿರುವ ಪ್ರಯಾಣಿಕ ಸುಭಾಸ್ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದವರಾಗಿದ್ದು, ಹುನಗುಂದ ತಾಲೂಕಿನ ಧನ್ನೂರ ಗ್ರಾಮದಲ್ಲಿ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಳಕಲ್ ನಗರ ಠಾಣೆ ಪೊಲೀಸರು ಗಾಯಾಳು ಸುಭಾಸ್‌ರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ತನಿಖೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts