More

    ಸಿರಿಗೆರೆಯಲ್ಲಿ ವೀರಗಾಸೆ ಸ್ಪರ್ಧೆ ಆ.10, 11ಕ್ಕೆ

    ಚಿತ್ರದುರ್ಗ: ಜನಪದ ಕಲೆಗಳನ್ನು ಪೋಷಿಸುವ ಉದ್ದೇಶದಿಂದ ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ ಅಣ್ಣನ ಬಳಗ ಆ.10 ಮತ್ತು 11ರಂದು ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆ ಆಯೋಜಿಸಿದೆ.

    ಮಠದಲ್ಲಿ ಕಳೆದ 37 ವರ್ಷಗಳಿಂದ ವೀರಗಾಸೆ ಸ್ಪರ್ಧೆ ನಿರಂತರವಾಗಿ ನಡೆಯುತ್ತಿದ್ದು, ಪ್ರತಿ ವರ್ಷ ನೂರಾರು ತಂಡಗಳು ಭಾಗವಹಿಸುತ್ತವೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ವೀರಗಾಸೆ ಕಲೆ ಕುರಿತಾಗಿ ಕಾರ್ಯಾಗಾರ ನಡೆಯಲಿದ್ದು, ಕಲಾವಿದರಿಗೆ ಶಿಕ್ಷಣ, ತರಬೇತಿ ನೀಡಲಾಗುತ್ತದೆ.

    19ನೇ ತರಳಬಾಳು ಜಗದ್ಗುರು ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿಗಳ 85ನೇ ಶ್ರದ್ಧಾಂಜಲಿ ಅಂಗವಾಗಿ ವೀರಗಾಸೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಲು ಕೋರಲಾಗಿದೆ.
    ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಆ.7ರೊಳಗೆ ಸಿರಿಗೆರೆಯಲ್ಲಿನ ಅಣ್ಣನ ಬಳಗ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ: 9986191968 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts