More

    ಸಿದ್ದಾಪುರ ಬಸ್ ನಿಲ್ದಾಣ ಬಳಿ ಕಾಡಾನೆ ಪ್ರತ್ಯಕ್ಷ

    ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಆಗಾಗ್ಗೆ ಕಾಣಿಸಿಕೊಂಡು ಭೀತಿ ಸೃಷ್ಟಿಸುತ್ತಿದ್ದ ಕಾಡಾನೆ ಈಗ ಪಟ್ಟಣಕ್ಕೆ ಕಾಲಿಟ್ಟಿದೆ.
    ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಸಿದ್ದಾಪುರ ಬಸ್ ನಿಲ್ದಾಣ ಬಳಿ ಕಾಡಾನೆ ಪ್ರತ್ಯಕ್ಷವಾಗಿದ್ದು, ಆನೆಯನ್ನು ನೋಡಿದ ಆಟೋ ಚಾಲಕ ಜಲೀಲ್ ಎಂಬುವರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಸುರಕ್ಷಿತ ಸ್ಥಳ ಸೇರಿಕೊಂಡಿದ್ದಾರೆ. ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಕುರುಬರು ಮೊಟ್ಟೆ ತೋಟ ಬಳಿಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಕರಡಿಗೋಡು ರಸ್ತೆಗೆ ಹೋಗಲು ಆನೆ ಯತ್ನಿಸಿದೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಮುಂಭಾಗವಿದ್ದ ಮುಸ್ತಾಫ ಎಂಬುವರ ಮನೆ ಬಳಿ ತೆರಳಿ ಕಾಂಪೌಂಡ್ ಹಾನಿ ಮಾಡಿದೆ. ಈ ವೇಳೆ ಸ್ಥಳೀಯರು ಜೋರಾಗಿ ಕಿರುಚಿದ್ದರಿಂದ ಕಾಡಾನೆ ಬಂದ ದಾರಿಯಲ್ಲೇ ವಾಪಸಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರು. ಜನವಸತಿ ಪ್ರದೇಶಕ್ಕೆ ಕಾಡಾನೆ ನುಗ್ಗಿದ್ದರಿಂದ ಸ್ಥಳೀಯರು ಭೀತಿಗೆ ಒಳಗಾಗಿದ್ದಾರೆ. ಕತ್ತಲಾದ ನಂತರ ಹೊರಗೆ ಸುತ್ತಾಡಲು ಭಯಪಡುತ್ತಿದ್ದಾರೆ. ಕಾಡಾನೆಯ ರಾತ್ರಿ ಸಂಚಾರವನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts