ಉಳ್ಳಾಗಡ್ಡಿ ಖಾನಾಪುರ: ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಜ.22 ರಂದು ಹಮ್ಮಿಕೊಂಡಿರುವ ಹುಕ್ಕೇರಿ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಎಂ.ಆರ್.ಬಾಳಿಕಾಯಿ ಅವರನ್ನು ಭಾನುವಾರ ಸಾಂಪ್ರದಾಯಿಕವಾಗಿ ಆಹ್ವಾನಿಸಲಾಯಿತು.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಸರ್ವಾಧ್ಯಕ್ಷ ಎಂ.ಆರ್.ಬಾಳಿಕಾಯಿ ಅವರ ಹೆಬ್ಬಾಳದ ನಿವಾಸಕ್ಕೆ ಭೇಟಿ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ಹುಕ್ಕೇರಿ ತಾಲೂಕು ಕಸಾಪ ಅಧ್ಯಕ್ಷ ಪ್ರಾ. ಪ್ರಕಾಶ ಅವಲಕ್ಕಿ, ಸಾಹಿತಿ ಎಲ್.ವಿ.ಪಾಟೀಲ, ಮಕ್ಕಳ ಸಾಹಿತಿಗಳಾದ ಎಸ್.ಎಂ.ಶಿರೂರ, ಸಾಹಿತಿಗಳಾದ ರಾಜಶೇಖರ ಇಚ್ಚಂಗಿ, ಡಾ. ಡಿ.ಬಿ.ಗವಾನಿ, ಮಂಜುಳಾ ಅಡಕೆ, ಶಿವಾನಂದ ಗುಂಡಾಳಿ, ಜಿ.ಕೆ.ಹಿರೇಮಠ, ಎಂ.ಎಸ್.ಹಿರೇಮಠ, ಹೆಬ್ಬಾಳದ ಕುಶಾಲ ಖೋತ, ಆನಂದ ಕಂಕಣವಾಡಿ ಇತರರಿದ್ದರು.