ದಾವಣಗೆರೆ: ಸಂವಿಧಾನದಿಂದ ದೇಶದ ಪ್ರತಿಯೊಬ್ಬರಿಗೂ ಸಮಬಾಳು ದೊರೆತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ನಿಂದ ನಗರದ ಕಾಂಗ್ರೆಸ್ ಕಚೇರಿಯ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ರಚಿಸಿ 1949ರ ನವೆಂಬರ್ 26ರಂದು ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಗೆ ಸಲ್ಲಿಸಿದರು. ಅಂದು ಸಂವಿಧಾನ ಅಂಗೀಕರಿಸಿದ ಸರ್ಕಾರ 1950ರ ಜನವರಿ 26ರಂದು ಜಾರಿಗೆ ತಂದಿತು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಕರಡು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಂವಿಧಾನದ ಮಹತ್ವದ ಬಗ್ಗೆ ವಿವರಿಸಿದರು.
ಜವಾಹರ್ಲಾಲ್ ಬಾಲ್ ಮಂಚ್ನ ಮೈನುದ್ದೀನ್ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್. ಚೈತನ್ಯಕುಮಾರ್, ರಘು ಜಾಧವ್, ಯುವರಾಜ್, ಸದ್ದಾಂ, ಶ್ರೀಕಾಂತ್ ಬಗೇರ, ಎಸ್.ರವಿಕುಮಾರ್, ದಾಕ್ಷಾಯಣಮ್ಮ, ಶುಭಮಂಗಳ ಇತರರು ಇದ್ದರು.
ವೀರಯೋಧ ಪ್ರಾಂಜಲ್ಗೆ ಶ್ರದ್ದಾಂಜಲಿ
ಉಗ್ರರ ವಿರುದ್ಧದ ಕಾದಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಶ್ರದ್ದಾಂಜಲಿ ಸಭೆ ನಡೆಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸೇರಿ ಪಕ್ಷದ ಮುಖಂಡರು ಮಾತನಾಡಿ ಚಿಕ್ಕ ವಯಸ್ಸಿನಲ್ಲೇ ಉನ್ನತ ಹುದ್ದೆ ಪಡೆದ ರಾಜ್ಯದ ಹೆಮ್ಮೆಯ ವೀರಯೋಧನ ಕುರಿತು ಗುಣಗಾನ ಮಾಡುವ ಮೂಲಕ ಸ್ಮರಿಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭಮಂಗಳ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಸ್. ಮಲ್ಲಿಕಾರ್ಜುನ್, ಕೆ.ಎಚ್. ಚೈತನ್ಯಕುಮಾರ್, ರಘು ಜಾಧವ್, ಯುವರಾಜ್, ಸದ್ದಾಂ, ಶ್ರೀಕಾಂತ್ ಬಗೇರ, ಎಸ್. ರವಿಕುಮಾರ್, ಮೈನುದ್ದೀನ್ ಇತರರು ಇದ್ದರು.
—
ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ರಚಿಸಿ 1949ರ ನವೆಂಬರ್ 26ರಂದು ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಗೆ ಸಲ್ಲಿಸಿದರು. ಅಂದು ಸಂವಿಧಾನ ಅಂಗೀಕರಿಸಿದ ಸರ್ಕಾರ 1950ರ ಜನವರಿ 26ರಂದು ಜಾರಿಗೆ ತಂದಿತು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಕರಡು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಂವಿಧಾನದ ಮಹತ್ವದ ಬಗ್ಗೆ ವಿವರಿಸಿದರು.
ಜವಾಹರ್ಲಾಲ್ ಬಾಲ್ ಮಂಚ್ನ ಮೈನುದ್ದೀನ್ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್. ಚೈತನ್ಯಕುಮಾರ್, ರಘು ಜಾಧವ್, ಯುವರಾಜ್, ಸದ್ದಾಂ, ಶ್ರೀಕಾಂತ್ ಬಗೇರ, ಎಸ್.ರವಿಕುಮಾರ್, ದಾಕ್ಷಾಯಣಮ್ಮ, ಶುಭಮಂಗಳ ಇತರರು ಇದ್ದರು.
ವೀರಯೋಧ ಪ್ರಾಂಜಲ್ಗೆ ಶ್ರದ್ದಾಂಜಲಿ
ಉಗ್ರರ ವಿರುದ್ಧದ ಕಾದಾಟದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಶ್ರದ್ದಾಂಜಲಿ ಸಭೆ ನಡೆಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸೇರಿ ಪಕ್ಷದ ಮುಖಂಡರು ಮಾತನಾಡಿ ಚಿಕ್ಕ ವಯಸ್ಸಿನಲ್ಲೇ ಉನ್ನತ ಹುದ್ದೆ ಪಡೆದ ರಾಜ್ಯದ ಹೆಮ್ಮೆಯ ವೀರಯೋಧನ ಕುರಿತು ಗುಣಗಾನ ಮಾಡುವ ಮೂಲಕ ಸ್ಮರಿಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭಮಂಗಳ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಸ್. ಮಲ್ಲಿಕಾರ್ಜುನ್, ಕೆ.ಎಚ್. ಚೈತನ್ಯಕುಮಾರ್, ರಘು ಜಾಧವ್, ಯುವರಾಜ್, ಸದ್ದಾಂ, ಶ್ರೀಕಾಂತ್ ಬಗೇರ, ಎಸ್. ರವಿಕುಮಾರ್, ಮೈನುದ್ದೀನ್ ಇತರರು ಇದ್ದರು.
—