ಕಲಬುರಗಿ: ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಕೆಕೆ ಬಡಾವಣೆಯಲ್ಲಿ ಮಂಗಳವಾರ ಜರುಗಿದೆ.
ವಿಜಯಲಕ್ಷ್ಮೀ (45) ಕೊಲೆಯಾದವಳು. ಮಂಗಳವಾರ ಬೆಳಗ್ಗೆ 3 ಜನರು ಮನೆಗೆ ನುಗ್ಗಿ, ವಿಜಯಲಕ್ಷ್ಮೀ ಮೇಲೆ ಮಾರಕಾಸ್ತ್ರಗಳನ್ನು ಬಿಸಿದ್ದಾರೆ. ತಲವಾರ ಏಟಿನಿಂದ ತೀವ್ರಗಾಯಗೊಂಡ ವಿಜಯಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ವೇಳೆ ಮಧ್ಯ ಪ್ರವೇಶಿಸಿದ ಮಗಳು ಹಾಗೂ ಸಹೋದರಿಗೂ ಗಂಭೀರ ಗಾಯಗಳಾಗಿವೆ.
ಕಮಿಷನರ್ ಆರ್.ಚೇತನ್ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿದೆ ಎಂದು ಕೊಲೆಯಾದ ವಿಜಯಲಕ್ಷ್ಮೀ ಪುತ್ರ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ.