More

    ಸಣ್ಣಪುಟ್ಟ ಸಮುದಾಯ ಒಗ್ಗಟ್ಟು ಪ್ರದರ್ಶಿಸಲಿ

    • ಮೈಸೂರು : ಸಣ್ಣಪುಟ್ಟ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಮಾತ್ರ ಅಭಿವೃದ್ಧಿ ಹೊಂದಬಹುದು ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.

    • ಹುಣಸೂರು ನಗರದ ನಡುಬೀದಿಯಲ್ಲಿರುವ ಶ್ರೀ ಕೋಲನೂರು ಮಾರಿಯಮ್ಮ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ಸ್ಥಳೀಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    • ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಿಮ್ಮಲ್ಲಿರಬಹುದಾದ ವ್ಯತ್ಯಾಸಗಳನ್ನು ಬದಿಗಿಟ್ಟು ಒಂದಾಗಿ ಹೋರಾಡುವ ಛಲವಿದ್ದರೆ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಲೂಕಿನಲ್ಲಿ ಜನರ ಭಾವನಾತ್ಮಕ ಭಾವನೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಹಿಂದಿನಿಂದಲೂ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದ್ದು, ಮುಂದೆಯೂ ಈ ಕಾರ್ಯ ಮುಂದುವರಿಯಲಿದೆ ಎಂದರು.

    • ಸ್ಥಳೀಯರ ಒತ್ತಾಸೆಯ ಮೇರೆಗೆ ಕೋಲನೂರು ಮಾರಿಯಮ್ಮ ದೇವಾಲಯದ ರಾಜಗೋಪುರ ಮತ್ತು ಅಶ್ವತ್ಥಕಟ್ಟೆ ಅಭಿವೃದ್ಧಿಗೆ ತಾಯಿ ಹೆಸರಿನಲ್ಲಿ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿ ಒಂದು ಲಕ್ಷ ರೂ. ಮುಂಗಡ ನೀಡಿದರು. ಅಲ್ಲದೆ ಶಾಸಕರ ಅನುದಾನದಡಿ 5 ಲಕ್ಷ ರೂ.ಅನುದಾನ ಒದಗಿಸುವುದಾಗಿಯೂ ಭರವಸೆ ನೀಡಿದರು.

    • ನಗರಸಭೆ ಸದಸ್ಯ ರಮೇಶ್, ಮುಖಂಡರಾದ ಪೇಯಿಂಟ್ ರಾಜಣ್ಣ, ಷಣ್ಮುಗಂ, ಮಣಿ, ಚಂದ್ರ, ದೊರೆಸ್ವಾಮಿ, ಈಶ್ವರ್, ಮಹಾಲಿಂಗ, ಗಜ, ಗೋಪಾಲ, ಪುಟ್ಟ, ಮಹೀಂದ್ರ ಮಂಜುನಾಥ್ ಉಪಸ್ಥಿತರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts