ಹಾಸನ: ಜಿಲ್ಲೆಯ ಮಾನ ಮರ್ಯಾದೆಯನ್ನು ಹಾಳು ಮಾಡಿರುವ ಪ್ರಜ್ವಲ್ ರೇವಣ್ಣಗೆ ಭದ್ರತೆ ಕೊಡುವುದನ್ನು ಬಿಟ್ಟು ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು. ಪ್ರಕರಣವನ್ನು ಬೆಳಕಿಗೆ ತಂದ ಮಾಧ್ಯಮ ಪ್ರತಿನಿಧಿಗಳಿಗೆ ಭದ್ರತೆ ನೀಡಬೇಕೆಂದು ದಲಿತ ಮುಖಂಡ ಮರಿಜೋಸೆಫ್ ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಈ ಕುಟುಂಬ ಚೆನ್ನಾಗಿ ಇರುವುದರಿಂದ ಶಿಕ್ಷೆ ಆಗಲ್ಲ. ಈ ಪ್ರಕರಣದ ತನಿಖೆ ಮುಗಿಯುವರೆಗೆ ಶಾಸಕ ಎಚ್.ಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರ ಆಸ್ತಿ ಮುಟ್ಟುಗೋಲು ಹಾಕಬೇಕು. ಹಾಗೆಯೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕುಟುಂಬದ ಎಲ್ಲ ಸದಸ್ಯರ ಪಾಸ್ಪೋರ್ಟ್ಗಳನ್ನು ದಸ್ತಗಿರಿ ಮಾಡಬೇಕು. ರೆಡ್ ಕಾರ್ನರ್ ನೋಟಿಸ್ ಕೊಟ್ಟು ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಬಂಧಿಸಬೇಕು. ಇಂತಹವರಿಗೆ ಯಾರೂ ಬೆಂಬಲಿಸಬಾರದು. ಸರ್ಕಾರದ ಎಲ್ಲಾ ಸವಲತ್ತು ರದ್ದು ಮಾಡಬೇಕೆಂದು ಎಂದು ಹೇಳಿದರು.