More

    ಶಿವರಾತ್ರಿ ಹಬ್ಬಕ್ಕೆ ಎಲ್ಲೆಡೆ ಸಿದ್ಧತೆ

    ದಾವಣಗೆರೆ: ಶಿವನನ್ನು ಧ್ಯಾನಿಸುವ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ, ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಸಡಗರ ಕಂಡುಬಂದಿತು. ಗಡಿಯಾರ ಕಂಬ ವೃತ್ತ, ಕೆ.ಆರ್.ಮಾರುಕಟ್ಟೆ, ನಿಟುವಳ್ಳಿ ಇತರೆಡೆಗಳಲ್ಲಿ ಖರೀದಿ ಜೋರಾಗಿತ್ತು.

    ಜಾಗರಣೆ ಉಪವಾಸದ ಆಚರಣೆಗಾಗಿ ರಸ್ತೆಗಳಲ್ಲೆಲ್ಲ ಕಲ್ಲಂಗಡಿ ಹಣ್ಣಿನ ರಾಶಿ ಕಂಡುಬಂದಿತು. ಅದು ಸೇರಿ ಕರಬೂಜ, ಬನಾಸ್ಪತ್ರೆ ಹಣ್ಣುಗಳಿಗೆ ಬೇಡಿಕೆ ಕಂಡುಬಂದಿತು. ಇತರೆ ಹಣ್ಣು-ಹೂವು, ಬಿಲ್ವಪತ್ರೆ ಹಾಗೂ ಪೂಜಾ ಸಾಮಗ್ರಿ ಕೊಳ್ಳಲು ಜನರು ಮುಗಿಬಿದ್ದರು.
    ಶಿವರಾತ್ರಿಗಾಗಿ ಶಿವಾಲಯಗಳನ್ನು ಸ್ವಚ್ಛಗೊಳಿಸಿ, ಹೂವು, ವಿದ್ಯುತಲಂಕಾರ ಮಾಡಲಾಗುತ್ತಿತ್ತು. ಬಿಸಿಲು ಹೆಚ್ಚಿರುವ ಹಿನ್ನೆಲೆಯಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗಾಗಿ ಶಿವಾಲಯಗಳ ಬಳಿ ಪೆಂಡಾಲ್‌ಗಳನ್ನು ಅಳವಡಿಸುವ ಸಿದ್ಧತೆ ನಡೆಯಿತು. ಕೆಲವೆಡೆ ನೀರು, ಪ್ರಸಾದ ವ್ಯವಸ್ಥೆ, ಭಜನೆ, ಹೋಮ, ರುದ್ರಾಭಿಷೇಕ ಇತ್ಯಾದಿಗೆ ತಯಾರಿ ನಡೆಸಲಾಯಿತು. ನೃತ್ಯರೂಪಕ ಇತರೆ ಕಾರ್ಯಕ್ರಮಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧ್ದಪಡಿಸುತ್ತಿದ್ದು ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts