ಕಾರವಾರ: ವಾಹನಗಳಿಗೆ ಹೆಚ್ಚುವರಿಯಾಗಿ ಎಲ್ಇಡಿ ಲೈಟ್ಗಳನ್ನು ಅಳವಡಿಸಲು ಅವಕಾಶವಿಲ್ಲ. ಅವುಗಳನ್ನು ತೆಗೆದು, ನಾಶ ಮಾಡಿ ಎಂದು ಸಾರಿಗೆ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಪುರುಷೋತ್ತಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಆರ್ಟಿಒ ಕಚೇರಿಗೆ ಆಗಮಿಸಿ ಅವರು ಇಲಾಖೆಯ ಪ್ರಗತಿ ಪರಿಶೀಲಿಸಿದರು.
ಮರು ನೋಂದಣಿಗೆ ಬಂದ ಆರೋಗ್ಯ ಇಲಾಖೆ ಸರ್ಕಾರಿ ವಾಹನಗಳಿಗೂ ಹೆಚ್ಚುವರಿಯಾಗಿ ಲೈಟ್ ಅಳವಡಿಸಿರುವುದನ್ನು ಈ ಸಂದರ್ಭದಲ್ಲಿ ತೆರವು ಮಾಡಲಾಯಿತು.
ಕಳೆದ ಐದಾರು ತಿಂಗಳಲ್ಲಿ ನೂರಕ್ಕೂ ಹೆಚ್ಚು ವಾಹನಗಳು ಹೆಚ್ಚುವರಿಯಾಗಿ ಅಳವಡಿಸಿದ ಬಣ್ಣ, ಬಣ್ಣದ ಎಲ್ಇಡಿ ಲೈಟ್ಗಳನ್ನು , ಗುತ್ತಿಗೆ ಆಧಾರದ ಮೇಲೆ ಇಲಾಖೆಗಳು ಪಡೆದ ವಾಹನಗಳ ಮೇಲೆ ಅಳವಡಿಸಿದ ಫಲಕಗಳನ್ನು ತೆರವು ಮಾಡಲಾಗಿದೆ ಎಂದು ಆರ್ಟಿಒ ಆನಂದ ಪಾರ್ಥನಹಳ್ಳಿ, ಬ್ರೆಕ್ ಇನ್ಸ್ಪೆಕ್ಟರ್ ರವಿ ಬೀಸರವಳ್ಳಿ ಮಾಹಿತಿ ನೀಡಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪುರುಷೋತ್ತಮ ಅವರು, ಗೋವಾದಿಂದ ರಾಜ್ಯಕ್ಕೆ ಬರುವ ವಾಹನಗಳಿಗೆ ಶುಲ್ಕ ಪಡೆಯಲು ಗೋವಾ ಗಡಿಯಲ್ಲಿ ತಪಾಸಣಾ ಕೇಂದ್ರ ತೆರೆಯುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.