More

    ವರ್ಷದ ಎಲ್ಲ ದಿನವೂ ಸೇವಾ ಕಾರ್ಯ : ರೋಟರಿ ನೂತನ ಅಧ್ಯಕ್ಷ ಕೆ.ಕೃಷ್ಣೇಗೌಡ ಭರವಸೆ

    ಮೈಸೂರು : ಪಿರಿಯಾಪಟ್ಟಣ ಖಾಸಗಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋ. ಮಾಜಿ ಜಿಲ್ಲಾ ಪ್ರಾಂತಪಾಲ ಡಾ.ಆರ್.ಎಸ್.ನಾಗಾರ್ಜುನ, ನೂತನ ಅಧ್ಯಕ್ಷ ರೋ.ಕೆ.ಕೃಷ್ಣೇಗೌಡ ಮತ್ತು ಕಾರ್ಯದರ್ಶಿ ರೋ.ಜಿ.ಪಿ.ಪ್ರಸನ್ನ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.


    ಡಾ.ಆರ್.ಎಸ್.ನಾಗಾರ್ಜುನ ಮಾತನಾಡಿ, ರೋಟರಿ ಸಂಸ್ಥೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ. ವಿಶ್ವದಲ್ಲೇ ಮನ್ನಣೆ ಪಡೆದುಕೊಂಡಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.


    ಅಧ್ಯಕ್ಷ ರೋ.ಕೆ.ಕೃಷ್ಣೇಗೌಡ ಮಾತನಾಡಿ, ವರ್ಷದ 365 ದಿನವೂ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುವುದು ಆರೋಗ್ಯ, ಪರಿಸರ, ಕೃಷಿ, ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸೇವೆ ಮಾಡಲಾಗುವುದು ಎಂದು ತಿಳಿಸಿದರು.


    ಅಂರವಿಕಲ ಹಾಗೂ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    ಮೈಮುಲ್ ನಿರ್ದೇಶಕ ಆರ್.ಚಲುವರಾಜು, ವಿವೇಕಾನಂದ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಎಂ.ಪ್ರಕಾಶ್, ಸಹಾಯಕ ಪ್ರಾಂತಪಾಲ ರಾಮಚಂದ್ರ, ಜಿಲ್ಲಾ ಚೇರ‌್ಮನ್ ರೋ. ಡಾ.ಮಹೇಂದ್ರಸಿಂಗ್‌ಕಾಳಪ್ಪ, ವಲಯ ಪ್ರತಿನಿಧಿಗಳಾದ ವೈ.ಎಚ್.ಹನುಮಂತೇಗೌಡ, ಮಾಜಿ ಅಧ್ಯಕ್ಷ ನಾಗರಾಜು, ಅತ್ತಳ್ಳಿ ಕೆಂಪೇಗೌಡ, ಯೋಗೇಂದ್ರ, ನವೀನ್, ರಾಜೇಂದ್ರ, ಸುರೇಶ್, ಶಿವಕುಮಾರ್, ಸಿದ್ದೇಗೌಡ, ಎನ್.ಎಂ.ರಾಮಚಂದ್ರ, ಜಯರಾಮೇಗೌಡ, ಮಾಣಿಕ್‌ಚಂದ್‌ಚೌಧರಿ, ವೆಂಕಟೇಶ್‌ಪ್ರಸಾದ್, ವೆಂಕಟೇಶ್, ಶಿವಣ್ಣ, ಮುರಳಿ, ಕೃಷ್ಣೇಗೌಡ, ಅತ್ತಳ್ಳಿಬಾಬು, ಡಾ.ರಾಜೀವ್, ಪ್ರಭಾಕರ್, ವಾಸುದೇವ, ಮರಿಸ್ವಾಮಿ, ರಾಜೇಶ್ ಸೇರಿದಂತೆ ರೋಟರಿ ತಂಡದವರು ಹಾಜರಿದ್ದರು. ಪುಟಾಣಿಗಳಾದ ವನ್ಯಸಿಂಗ್ ಮತ್ತು ವಿರಾಟ್‌ಸಿಂಗ್ ಪ್ರಾರ್ಥನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts