More

    ಲಿಂಗೇಶ್ವರ ಅದ್ದೂರಿ ರಥೋತ್ಸವ

    ದಾವಣಗೆರೆ: ಗೀತಾಂಜಲಿ ಚಿತ್ರಮಂದಿರ ಸಮೀಪದ ಲಿಂಗೇಶ್ವರ ದೇವಸ್ಥಾನ ಸಮಿತಿಯಿಂದ ಶ್ರೀ ಲಿಂಗೇಶ್ವರ ಸ್ವಾಮಿ ರಥೋತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು.

    ಲಿಂಗೇಶ್ವರ ಸ್ವಾಮಿ ಮೂರ್ತಿ ಇರಿಸಿದ ಅಲಂಕೃತ ರಥವನ್ನು, ಟ್ರಾೃಕ್ಟರ್ ಮೂಲಕ ಎಳೆಯಲಾಯಿತು. ಹೆಬ್ಬಾಳ್ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
    ದೇವಸ್ಥಾನ ಆವರಣದಿಂದ ಆರಂಭವಾದ ರಥೋತ್ಸವ, ಮಹಾತ್ಮಗಾಂಧಿ ವೃತ್ತ ತಲುಪಿ ಪುನಃ ವಾಪಸಾಗಿ ಮಂಡಿಪೇಟೆ, ವಿಜಯಲಕ್ಷ್ಮೀ ರಸ್ತೆ, ಬಿನ್ನಿ ಕಂಪನಿ ರಸ್ತೆ ಮೂಲಕ ಮಂಡಿಪೇಟೆ ಮೂಲಕ ಸಾಗಿ ದೇವಸ್ಥಾನಕ್ಕೆ ಮೆರಳಿತು.
    ಮೆರವಣಿಗೆಯುದ್ದಕ್ಕೂ ಭಕ್ತರು ಹರಹರ ಮಹಾದೇವ, ಲಿಂಗೇಶ್ವರ ಮಹಾದೇವ ಕಿ ಜೈ ಘೋಷಣೆಗಳನ್ನು ಕೂಗಿ ಭಕ್ತಿ ಮೆರೆದರು. ಸಮಾಳ, ಡೊಳ್ಳು, ಬ್ಯಾಂಡ್‌ಸೆಟ್, ಕೀಲುಕುದುರೆ ಕಲಾವಿದರು ರಥೋತ್ಸವಕ್ಕೆ ಮೆರುಗು ನೀಡಿದರು.
    ದೇವಸ್ಥಾನ ಸಮಿತಿ ಅಧ್ಯಕ್ಷ ಅಜ್ಜಂಪುರ ಶೆಟ್ರು ಮಂಜುನಾಥ್, ಕಾರ್ಯದರ್ಶಿ ಕಿರುವಾಡಿ ಸುರೇಂದ್ರ, ಉಪಾಧ್ಯಕ್ಷ ಕಿರುವಾಡಿ ಸೋಮಣ್ಣ, ಕರಿಸಿದ್ದಪ್ಳರ ಸಿದ್ದೇಶ,ಮಾಗಾನಹಳ್ಳಿ ಪುಟ್ಟರಾಜ, ಮಾಗಾನಹಳ್ಳಿ ಮೋಹನ್, ಕಿರುವಾಡಿ ಚಂದ್ರಣ್ಣ, ಅಜ್ಜಂಪುರ ಕೃಷ್ಣ, ಮಹೇಶ್, ಅನಿಲ್‌ಕುಮಾರ್, ಎನ್. ರಾಜಶೇಖರ್, ಅಲೋಕ್‌ಕುಮಾರ್, ವಿಜಯಕುಮಾರ್ ಇತರರು ಭಾಗವಹಿಸಿದ್ದರು.
    ಅರ್ಚಕರಾದ ಕುಮಾರಸ್ವಾಮಿ, ಡಾ.ಜಿ.ಟಿ.ಸ್ವಾಮಿ ಪೂಜಾ ಕಾರ್ಯ ನೆರವೇರಿಸಿದರು. ಬೆಳಗ್ಗೆ ಅಲಂಕೃತ ದೇವಸ್ಥಾನದಲ್ಲಿ ಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ನೆರವೇರಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts