More

    ರಾಹುಲ್​ ಗಾಂಧಿಗೆ ತಪ್ಪು ಮಾಹಿತಿ

    ರಾಹುಲ್​ ಗಾಂಧಿಗೆ ತಪ್ಪು ಮಾಹಿತಿ
    ಕೋಲಾರದಲ್ಲಿ ಕಾಂಗ್ರೆಸ್​ ಅಹಿಂದ ಮುಖಂಡರು ನಗರ ಬ್ಲಾಕ್​ ಅಧ್ಯಕ್ಷ ಪ್ರಸಾದ್​ಬಾಬು ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚಿಸಿದರು. ಮುಖಂಡ ಅಂಚೆ ಅಶ್ವಥ್​, ನಗರಸಭೆ ಮಾಜಿ ಸದಸ್ಯ ರೌತ್​ ಶಂಕರಪ್ಪ, ಮಂಜುನಾಥ್​ ಇದ್ದರು.

    ಕೋಲಾರ
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದಲೇ ಸ್ವರ್ಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಿ ಅಹಿಂದ ಸಂಘಟನೆಗಳ ಮುಖಂಡರು ತೀಮಾರ್ನಿಸಿದರು.
    ನಗರದ ಹಾಲಿಸ್ಟಾರ್​ ಭವನದಲ್ಲಿ ಭಾನುವಾರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ಬಾಬು ಅಧ್ಯಕ್ಷತೆಯಲ್ಲಿ ನಡೆದ ಮುಖಂಡರ ತುರ್ತುಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದು, ಪಕ್ಷದ ನೇತಾರ ರಾಹುಲ್​ಗಾಂಧಿಗೆ ಖಾಸಗಿ ಏಜೆನ್ಸಿಯವರು ನೀಡಿರುವ ವರದಿ ಸತ್ಯಕ್ಕೆ ದೂರವಾಗಿದೆ. ಹೀಗಾಗಿ ಕೋಲಾರದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಬೇಕಿದೆ ಎಂದು ತಿಳಿಸಿದರು
    ನಗರ ಹೊರವಲಯದ ನಾಗರ್ಜುನ ಹೋಟೆಲ್​ನಲ್ಲಿ ಆಂಧ್ರ ಮೂಲದ ಖಾಸಗಿ ಏಜೆನ್ಸಿ ಸಮೀಕ್ಷೆದಾರ ಸುನೀಲ್​ ಉಳಿದುಕೊಂಡು ಸಮೀಕ್ಷೆ ನಡೆಸುತ್ತಿದ್ದದ್ದು ನಿಜ. ಪ್ರಾರಂಭದಲ್ಲಿ ಸಿದ್ದರಾಮಯ್ಯ ಅವರಿಗೆ ಅನುಕೂಲಕರವಾದ ವರದಿಗಳನ್ನು ನೀಡಿದ್ದರು. ನಂತರದಲ್ಲಿ ಅವರು ತಾವು ಉಳಿದುಕೊಂಡಿದ್ದ
    ಹೋಟೆಲ್​ ಮಾಲೀಕ ಜೆಡಿಎಸ್​ ಪಕ್ಷದವರಾಗಿದ್ದುದರಿಂದ ಆಮಿಷಕ್ಕೆ ಒಳಪಡೆಸಿ ಕ್ಷೇತ್ರ ಸುರಕ್ಷಿತವಲ್ಲ ಎಂಬ ತಪ್ಪು ಮಾಹಿತಿ ರಾಹುಲ್​ ಗಾಂಧಿಗೆ ಕೊಡಿಸಲಾಗಿದೆ ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯಪಟ್ಟರು.
    ವಕೀಲ ಶ್ರೀನಿವಾಸ್​ ಮಾತನಾಡಿ, ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂದು ಮತದಾರರು ಹಲವಾರು ಕನಸುಗಳನ್ನು ನಿರೀಕ್ಷಿಸಿದ್ದರು. ಅದರೆ ಅವರು ಸ್ಪರ್ಧಿಸುವುದಿಲ್ಲವೆಂಬ ವಿಚಾರ ತಿಳಿದು ಅಹಿಂದ ವರ್ಗಗಳಿಗೆ ಭಾರಿ ನೋವುಂಟಾಗಿದೆ. ಸಮಾನ ಮನಸ್ಕ ನಾಯಕರೆಲ್ಲರೂ ಸಂಘಟಿತರಾಗಿ ಸಿದ್ದರಾಮಯ್ಯರನ್ನು ಮತ್ತೆ ಕೋಲಾರದಿಂದ ಸ್ಪರ್ಧಿಸುವಂತೆ ಮಾಡಬೇಕಾಗಿದೆ ಎಂದರು. ನಗರಸಭೆ ಮಾಜಿ ಸದಸ್ಯ ರೌತ್​ ಶಂಕರಪ್ಪ, ಮುಖಂಡ ಮುಳಬಾಗಿಲು ವೆಂಕಟೇಶ್​ ಗೌಡ, ಗಂಗಮ್ಮ ಪಾಳ್ಯ ರಾಮಯ್ಯ ಮಾತನಾಡಿದರು.
    ನಗರಸಭೆ ಮಾಜಿ ಅಧ್ಯಕ್ಷ ವಿ.ಪ್ರಕಾಶ್​, ಮಾಜಿ ಸದಸ್ಯ ಸಿ.ಸೋಮಶೇಖರ್​, ಮುಖಂಡರಾದ ಲಾಲ್​ ಬಹುದ್ದೂರ್​ ಶಾಸ್ತ್ರಿ, ಕೃಷ್ಣಮೂರ್ತಿ, ಪೊಲೀಸ್​ ಅಶ್ವಥ್​, ಸುಧೀರ್​, ಪಾಲ್ಗುಣ, ವೆಂಕಟಪತಪ್ಪ, ಕಠಾರಿ ಪಾಳ್ಯ ಗಂಗಧಾರ್​, ವೈ.ಶಿವಕುಮಾರ್​, ಕಿಲಾರಿ ಪೇಟೆ ಮಣಿ, ಗಾಂಧಿನಗರ ವೆಂಕಟೇಶ್​, ಹಾರೋಹಳ್ಳಿ ಮಂಜುನಾಥ್​, ಗೌರಿಪೇಟೆ ರವೀಂದ್ರನಾಥ್​, ಪ್ರಭಾಕರ್​, ಬಸವನತ್ತ ಶ್ರೀನಿವಾಸ್​, ಕನಕನ ಪಾಳ್ಯದ ಶ್ರೀಕಾಂತ್​, ಗಾಜಲದಿನ್ನೆ ನಾರಾಯಣಸ್ವಾಮಿ, ಅನಂತಪ್ಪ. ಮೋಹನ್​ ಪ್ರಸಾದ್​, ವೆಂಕಟರಾಮ್​ ಮುಂತಾದವರು ಉಪಸ್ಥಿತರಿದ್ದರು.

    ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಾನು ಆಕಾಂಕ್ಷಿ


    ಕೋಲಾರ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ, ವರುಣಾ ಅಥವಾ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಹೈಕಮಾಂಡ್​ ನಿರ್ಧರಿಸಲಿದೆ. ಕೋಲಾರದಿಂದ ಸ್ಪರ್ಧಿಸಿದರೆ ನಾವು 100ಕ್ಕೆ 100ರಷ್ಟು ಗೆಲ್ಲಿಸಿಕೊಡುತ್ತೇವೆ. ಅಕಸ್ಮಾತ್​ ಸ್ಪರ್ಧೆ ಇಲ್ಲವೆಂದಾದರೆ ನಾನು ಕೋಲಾರಕ್ಕೆ ಪ್ರಬಲ ಆಕಾಂಯಾಗಿದ್ದೇನೆ ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
    ನಗರದ ಡಿಸಿಸಿ ಬ್ಯಾಂಕ್​ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದು ಬೇಡವೆಂದು ಹೈಕಮಾಂಡ್​ ಹೇಳಿದರೆ ಕೋಲಾರದಲ್ಲಿ ಸ್ಪರ್ಧೆಗೆ ಬಹಳಷ್ಟು ಆಕಾಂಗಳಿದ್ದಾರೆ. ಆದರೆ ಅಂತಹ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಹಾಗೂ ತಾಲೂಕಿನ ಎಲ್ಲ ಕಾಂಗ್ರೆಸ್​ ಮುಖಂಡರು ಒಂದು ತೀರ್ಮಾನಕ್ಕೆ ಬರುತ್ತೇವೆ. ಕೋಲಾರದಲ್ಲಿ ಕಾಂಗ್ರೆಸ್​ ಸಂಟನೆ ಬಲಿಷ್ಠವಾಗಿದೆ ಎಂದರು.
    ಸಿದ್ದರಾಮಯ್ಯ ಅವರು ಮಾಸ್​ ಲೀಡರ್​ ಆದ ಕಾರಣ ಅವರ ಸ್ಪರ್ಧೆಯ ವಿಚಾರ ಚರ್ಚೆಯಲ್ಲಿದೆ. ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬೆಳೆದಿದ್ದಾರೆ. ಆದ್ದರಿಂದ ಶನಿವಾರದಿಂದ ಸಿದ್ದರಾಮಯ್ಯ ಅವರ ೇತ್ರದ ಆಯ್ಕೆ ಮತ್ತು ಕೋಲಾರದ ಬಗ್ಗೆ ಚರ್ಚೆಯಾಗುತ್ತಿದೆ. ಈಗಾಗಲೇ ಕೋಲಾರಕ್ಕೆ 3 ಬಾರಿ ಬಂದು ಹೋಗಿದ್ದಾರೆ. ೇತ್ರದ ಆಯ್ಕೆ ಬಗ್ಗೆ ಹೈಕಮಾಂಡ್​ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ ಎಂದರು.
    ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವುದೇ ಆತಂಕವಿಲ್ಲ, ಬಿಜೆಪಿ ಮತ್ತು ಜೆಡಿಎಸ್​ನವರ ಅಬ್ಬರದ ಪ್ರಚಾರದಲ್ಲಿದ್ದಾರೆ. ಕೋಲಾರದಲ್ಲಿ ಇನ್ನೂ ಚುನಾವಣೆ ಕಾವು ಹೆಚ್ಚಾಗಿಲ್ಲ, ಪ್ರತಿಪಕ್ಷದವರು ಚುನಾವಣೆ ಬಗ್ಗೆ ಶೇ.10ರಷ್ಟು ಮಾತನಾಡುತ್ತಿದ್ದಾರೆ, ಸಿದ್ದರಾಮಯ್ಯನವರು ಕೋಲಾರಕ್ಕೆ ಬರುವುದಾಗಿ ೂಷಣೆ ಮಾಡಿದ ನಂತರ ಐದಾರು ತಿಂಗಳಿನಿಂದ ಕೋಲಾರದಲ್ಲಿ ಕಾಂಗ್ರೆಸ್​ ಗಟ್ಟಿಯಾಗಿ ಬೇರೂರಿದೆ ಎಂದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಇಬ್ಬರು ರಾಜ್ಯಾ ದ್ಯಂತ ಸಂಚರಿಸಿ ಎಲ್ಲ ೇತ್ರದಲ್ಲಿಯೂ ನಾವೇ ಸ್ಪರ್ಧಿಗಳೆಂದು ಹೇಳುತ್ತಿದ್ದಾರೆ. ಅವರು ಈ ರಾಜ್ಯದ ಪರಮೋಚ್ಚ ನಾಯಕರು ಎಂದು ಹೇಳಿದರು.
    ಎರಡು ಜಿಲ್ಲೆಗಳಲ್ಲಿ ಸಂಪರ್ಕ: ಕೆಪಿಸಿಸಿ ಅಧ್ಯಕ್ಷರು ನನಗೇ ಟಿಕೆಟ್​ ಖಾತ್ರಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. 224 ೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲಬೇಕೆಂದು ಮತ ಕೇಳುತ್ತಿದ್ದಾರೆ. ಇಲ್ಲಿ ಅಭ್ಯರ್ಥಿಗಿಂತ ಪಕ್ಷ ಮುಖ್ಯ. ನಾನು ಸತತವಾಗಿ ಡಿ.ಕೆ.ಶಿವಕುಮಾರ್​ ಸಂಪರ್ಕದಲ್ಲಿದ್ದೇನೆ. ಕೋಲಾರ&ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಸಂಪರ್ಕದಲ್ಲಿದ್ದೇನೆ. ನಾನು ಆಕಾಂಯಾಗಿ ರುವುದರಿಂದ ನನಗೆ ಇನ್ನೂ ಯಾವ ೇತ್ರವೆಂದು ತಿಳಿಸಿಲ್ಲ. ನಾನು ಕೋಲಾರದಲ್ಲಿ ಇರುವಂಥ ವ್ಯಕ್ತಿ. ನನಗೆ ನವದೆಹಲಿ ಮತ್ತು ರಾಜ್ಯ ರಾಜಕಾರಣದಲ್ಲಿ ಏನು ನಡೆಯುತ್ತದೆ ಎಂದು ಗೊತ್ತಿಲ್ಲ ಎಂದು ಬ್ಯಾಲಹಳ್ಳಿ ಗೋವಿಂದಗೌಡರು ಸ್ಪಷ್ಟ ಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts