More

    ರಂಗಪಂಚಮಿ ಮುನ್ನಾ ದಿನವೂ ಜನದಟ್ಟಣೆ

    ಹುಬ್ಬಳ್ಳಿ: ರಂಗಪಂಚಮಿ ಮುನ್ನಾ ದಿನವಾದ ಗುರುವಾರ ನಗರದ ವಿವಿಧೆಡೆ ಕಾಮಣ್ಣ-ರತಿದೇವಿ ಮೂರ್ತಿಗಳಿಗೆ ಪೂಜೆ ನಡೆಯಿತು. ಚಿಂದಿ ಓಣಿ, ದಿವಟೆ ಓಣಿ, ಮ್ಯಾದರ ಓಣಿ, ತಿಮ್ಮಸಾಗರ ಓಣಿ, ತುಮಕೂರು ಓಣಿ ಮತ್ತಿತರೆಡೆ ಕಾಮಣ್ಣ-ರತಿದೇವಿ ಮೂರ್ತಿಗಳನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಶುಕ್ರವಾರದಂದು ಕಾಮಣ್ಣ ಮೂರ್ತಿಯ ದಹನ ನಡೆಯಲಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮೂರ್ತಿಗಳ ದರ್ಶನ ಪಡೆದರು.

    ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಪೆಂಡಾಲ್​ಗಳು ಭಕ್ತರಿಂದ ತುಂಬಿದ್ದವು. ನೈವೇದ್ಯ ಹಿಡಿದು, ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತಿದ್ದುದು ಎಲ್ಲೆಡೆ ಕಂಡುಬಂತು.

    ಭಾವಸಾರ ಹೋಳಿ ಇಂದು:

    ಭಾವಸಾರ ಯೂಥ್ ಫೆಡರೇಷನ್ ವತಿಯಿಂದ ಮಾ. 13ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಭಾವಸಾರ ಹೋಳಿ(ರಂಗ ಪಂಚಮಿ ಉತ್ಸವ) ನಗರದ ಚವ್ಹಾಣ ಗ್ರೀನ್ ಗಾರ್ಡನ್​ನಲ್ಲಿ ಏರ್ಪಾಟಾಗಿದೆ. ಭಾವಸಾರ ಕ್ಷತ್ರೀಯ ಸಮಾಜದವರಿಗಾಗಿಯೇ ಈ ಸಂಭ್ರಮ ಆಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts