ಚಿತ್ರದುರ್ಗ: ರಾಜ್ಯ ಮತ್ತು ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಪಂನಿಂದ ಹಿರಿಯೂರಿನ ಬಬ್ಬೂರು ಕೃಷಿ ಕೇಂದ್ರದಲ್ಲಿ ಶನಿವಾರ ಸರ್ಕಾರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಯೋಗ ತರಬೇತಿ ಕಾರ್ಯಾಗಾರ ನಡೆಯಿತು.
ತರಬೇತುದಾರರಾದ ಎಂ.ತಿಪ್ಪೇಸ್ವಾಮಿ, ರವಿ ಕೆ.ಅಂಬೇಕರ್, ರೂಪಾ ಅಳಗವಾಡಿ, ವೈದ್ಯಾಧಿಕಾರಿಗಳಾದ ಡಾ.ಗಂಗಾಧರ್ ವರ್ಮ, ಡಾ.ಸರಸ್ವತಿ, ಡಾ.ಜಿ.ಬಿ.ನಾರದಮುನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ ಸಂ ನಾಗಸಮುದ್ರ, ಡಾ.ಶಿವಕುಮಾರ್, ಕಾರ್ಯಕ್ರಮ ಅಧಿಕಾರಿ ಡಾ.ಗಿರೀಶ್ ಇತರರಿದ್ದರು.