More

    ಮೆಳ್ಳಹಳ್ಳಿ ಶನೈಶ್ಚರ ಸ್ವಾಮಿ ಬಸವ ನಿಧನ

    ಕೆ.ಎಂ.ದೊಡ್ಡಿ: ಸಮೀಪದ ಮೆಳ್ಳಹಳ್ಳಿಯ ಶನೈಶ್ಚರ ಸ್ವಾಮಿ ದೇವಸ್ಥಾನದ ಬಸವ ಗುರುವಾರ ರಾತ್ರಿ ಅನಾರೋಗ್ಯ ಕಾರಣದಿಂದ ನಿಧನವಾಗಿದೆ.
    ಸುಮಾರು 19ವರ್ಷಗಳ ಹಿಂದೆ ದೇವರಹಳ್ಳಿಯ ಮಲ್ಲೇಶ್ ಅವರು ಶನೈಶ್ಚರ ಸ್ವಾಮಿ ದೇವಸ್ಥಾನಕ್ಕೆ ಬಸವನನ್ನು ಕಾಣಿಕೆಯಾಗಿ ನೀಡಿದ್ದರು. ಅಂದಿನಿಂದ ಗ್ರಾಮದಲ್ಲಿ ಹಬ್ಬಗಳು ನಡೆಯುವ ಸಂದರ್ಭದಲ್ಲಿ ಬಸವನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತಿತ್ತು. ಭಕ್ತರು ಬಸವನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಿದ್ದರು.

    ಕಳೆದ ಸೋಮವಾರ ಕಾಲಿಗೆ ಗಾಯವಾಗಿದ್ದ ಪರಿಣಾಮ ಪಶು ಆಸ್ಪತೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ನಿಧನವಾಗಿದೆ. ಬಸಪ್ಪ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಬಸವನ ದೇಹಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು ದೇವಾಲಯದ ಸನಿಹದಲ್ಲಿರುವ ಪ್ರಧಾನ ಅರ್ಚಕ ಮಹೇಶ್ ಅವರ ನಿವೇಶನದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts