More

    ಮದ್ಯದ ಮತ್ತಿನಲ್ಲಿ ಬಾರ್ ಬಾಗಿಲಿಗೆ ಗುಂಡು

    ಮೂಡಿಗೆರೆ: ಪಟ್ಟಣ ಸಮೀಪದ ಹ್ಯಾಂಡ್ ಪೋಸ್ಟ್​ನ ಮಧುರ ಬಾರ್​ನಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿದ ಯುವಕರಿಬ್ಬರು ಮನೆಗೆ ತೆರಳಿ ಬಂದೂಕು ತಂದು ಬಾರ್​ನ ಶಟರ್ಸ್​ಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

    ಹಾಲೂರು ಗ್ರಾಮದ ಶ್ರೀವತ್ಸ (25) ಬಂಧಿತ ಆರೋಪಿಯಾಗಿದ್ದು, ಮನೋಜ್ (22) ಎಂಬಾತ ಪರಾರಿಯಾಗಿದ್ದಾನೆ. ಶನಿವಾರ ರಾತ್ರಿ 10.45ರ ವೇಳೆ ಬಾರ್​ಗೆ ಬಂದ ಶ್ರೀವತ್ಸ ಮತ್ತು ಮನೋಜ್ ಮದ್ಯ ಸೇವಿಸಿ ಕುರ್ಚಿ, ಟೇಬಲ್ ಮತ್ತಿತರ ವಸ್ತುಗಳನ್ನು ಎಸೆದು ಚೆಲ್ಲಾಪಿಲ್ಲಿಯಾಗಿಸಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದರು. ಬಾರ್ ಮಾಲೀಕ ರಘು ಶೆಟ್ಟಿ , ಅವರ ಪುತ್ರ ಅಭಿಲಾಷ್ ಯುವಕರನ್ನು ಸಮಾಧಾನಪಡಿಸಿ ಮನೆಗೆ ಕಳಿಸಿ ಬಾರ್ ಬಾಗಿಲು ಮುಚ್ಚಿದರು. ತಡ ರಾತ್ರಿ 12.45ಕ್ಕೆ ಸ್ಕೂಟರ್​ನಲ್ಲಿ ಬಂದೂಕು ಹಿಡಿದು ಬಂದ ಯುವಕರು ರಸ್ತೆಯಲ್ಲಿ ನಿಂತು ಬಾರ್ ಒಳಗೆ ಮಲಗಿದ್ದ ಸಿಬ್ಬಂದಿಯನ್ನು ಹೊರಗೆ ಬರುವಂತೆ ಕರೆದಿದ್ದಾರೆ. ಸಿಬ್ಬಂದಿ ಕಿಟಕಿಯಲ್ಲಿ ನೋಡಿದಾಗ ಬಾಗಿಲಿನ ಶಟರ್ಸ್​ಗೆ ಗುಂಡು ಹೊಡೆದಿದ್ದಾರೆ. ಗುಂಡಿನ ಸದ್ದು ಕೇಳುತ್ತಲೇ ಬಾರ್ ಸಿಬ್ಬಂದಿ ಒಳಗೆ ಓಡಿದರು.

    ಬಾರ್ ಮಾಲೀಕ ರಾತ್ರಿಯೇ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಶ್ರೀವತ್ಸನನ್ನು ರಾತ್ರಿಯೇ ಬಂಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts