More

    ಮಂಗ್ಳೂರಿಂದ ಆಗಮಿಸಿದ 9 ಜನ ಮೆಗ್ಗಾನ್​ಗೆ

    ಭದ್ರಾವತಿ: ಮಂಗಳೂರಿನಿಂದ ನಗರಕ್ಕೆ ಆಗಮಿಸಿರುವ 9 ಮಂದಿಯನ್ನು ಶನಿವಾರ ತಾಲೂಕಿನ ಕಾರೇಹಳ್ಳಿ ಗ್ರಾಮದ ಬಳಿ ಇರುವ ಚೆಕ್​ಪೋಸ್ಟ್​ನಲ್ಲಿ ತಡೆದು ಅವರ ಆರೋಗ್ಯ ತಪಾಸಣೆ ನಡೆಸಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

    ಮಂಗಳೂರಿನಿಂದ ಆಗಮಿಸಿರುವ ಎಲ್ಲರೂ ದೊಣಬಘಟ್ಟ ನಿವಾಸಿಗಳಾಗಿದ್ದು ಮಂಗಳೂರಿನ ಕೆಲ ಹೋಟೆಲ್​ಗಳಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗಿನ ಜಾವ ಕಾರಿನಲ್ಲಿ ಆಗಮಿಸಿದ ಅವರನ್ನು ಚೆಕ್​ಪೋಸ್ಟ್ ಸಿಬ್ಬಂದಿ ವಿಚಾರಣೆ ನಡೆಸಿ ನಂತರ ಸ್ಥಳೀಯ ಆಸ್ಪತ್ರೆಗೆ ಕರೆತಂದು ತಪಾಸಣೆಗೊಳಪಡಿಸಿದ್ದಾರೆ. ತಪಾಸಣೆ ವೇಳೆ ಯಾರಲ್ಲಿಯೂ ಕರೊನಾ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಅವರೆಲ್ಲರನ್ನೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಶುಕ್ರವಾರದವರೆಗೂ ನಗರಕ್ಕೆ ಇತರೆ ಜಿಲ್ಲೆಗಳಿಂದ 703 ಜನ ಆಗಮಿಸಿದ್ದು ಪ್ರತಿದಿನ ಹೊಸಬರ ಸೇರ್ಪಡೆ ಹೆಚ್ಚುತ್ತಲೇ ಇದೆ. ಗಡಿ ನಿಯಂತ್ರಣ ಮಾಡದಿದ್ದರೆ ಸಮಸ್ಯೆ ಉಲ್ಭಣಿಸುವ ಆತಂಕ ಎದುರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts