More

    ಭೂಪಕಂಪನಕ್ಕೆ ಬೆಚ್ಚಿ ಬಿದ್ದ ಜನತೆ : ವಿಜ್ಞಾನಿಗಳಿಂದ ಪರಿಶೀಲನೆ

    ವಿಜಯಪುರ : ಕಳೆದೊಂದು ವಾರದಿಂದ ಭೂಕಂಪನದ ಅನುಭವಕ್ಕೆ ಬೆಚ್ಚಿ ಬಿದ್ದ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಮಂಗಳವಾರ ಬೆಂಗಳೂರಿನ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಶೀಲನೆ ನಡೆಸಿದೆ.
    ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ಮಸೂತಿ, ಮಲಘಾಣ ಹಾಗೂ ಬಬಲೇಶ್ವರ ತಾಲೂಕಿನ ಅಡವಿ ಸೋಮನಾಳ ಗ್ರಾಮಗಳಿಗೆ ಭೇಟಿ ನೀಡಿರುವ ತಂಡ ಅಲ್ಲಿನ ಗ್ರಾಮಸ್ಥರೊಂದಿಗೆ ಅಭಿಪ್ರಾಯ ಪಡೆದಿದ್ದಾರೆ. ಮನೆಗಳು ಬಿರುಕು ಬಿಟ್ಟಿವೆ ಎನ್ನಲಾಗಿದ್ದು ಅವುಗಳನ್ನು ಗಮನಿಸಿದ್ದು ಅಲ್ಲಿನ ಭೂಮಿಯ ಮೇಲ್ಮೈ ಪರಿಶೀಲನೆ ನಡೆಸಿದ್ದಾರೆ.
    ಕರ್ನಾಟಕ ರಾಷ್ಟ್ರೀಯ ವಿಪತ್ತು ನಿಯಂತ್ರಣ ಮಂಡಳಿಯ ವಿಜ್ಞಾನಿ ಜಗದೀಶ ಎಸ್, ಕಿರಿಯ ವಿಜ್ಞಾನಿ ಅಭಿನವ ಕೆ.ಕೆ, ರಮೇಶ ಎಲ್.ದಿಕ್ಪಾಲ್, ಗಣಿ ಇಲಾಖೆಯ ಭೂ ವಿಜ್ಞಾನಿ ವಿಶ್ವನಾಥ, ಸುಭಾಷಚಂದ್ರ, ನಾಗಭೂಷಣ ಹಾಗೂ ಮಹೇಶ ಎ, ರಾಕೇಶ ಜೈನಾಪುರ ಮತ್ತಿತರರು ತಂಡದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts