More

    ಬೆಚ್ಚಿಬೀಳಿಸಿದ ಬೇವಿನಮಟ್ಟಿಯ ಮರ್ಯಾದಾ ಹತ್ಯೆ !

    ಬಾಗಲಕೋಟೆ: ಬುದ್ದಿ ಹೇಳಿದರೂ ಅನ್ಯ ಜಾತಿಯ ಹುಡುಗನ ಜೊತೆ ಪ್ರೀತಿಯಿಂದ ಹೊರಬಾರದ ಹಿನ್ನೆಲೆಯಲ್ಲಿ ಹುಡುಗಿಯ ಕುಟುಂಬದವರು ಹಾಗೂ ಸಂಬಂಧಿಕರು ಸೇರಿ ಪ್ರೇಮಿಗಳಿಬ್ಬರನ್ನು ಕೊಲೆ ಮಾಡಿ ನದಿಗೆ ಎಸೆದಿರುವ ಪ್ರಕರಣ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.


    ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿ ಗ್ರಾಮದ ಪ್ರೇಮಿಗಳನ್ನು ಮರ್ಯಾದಾ ಹತ್ಯೆ ಮಾಡಿದ್ದು, ಕೊಲೆಗೈದು ೧೫ ದಿನಗಳ ಬಳಿಕ ಪ್ರಕರಣ ಪತ್ತೆಯಾಗಿದೆ. ಆದರೆ, ಇನ್ನೂವರೆಗೂ ಪ್ರೇಮಿಗಳ ಶವಗಳು ಸಿಕ್ಕಿಲ್ಲ. ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಮೂವರು ಆರೋಪಿಯನ್ನು ಬಂಧಿಸಿದ್ದು, ಹುಡುಗಿಯ ತಂದೆಯನ್ನು ವಿಚಾರಣೆ ನಡೆಸಿದ್ದು, ಇನ್ನು ಪ್ರಮುಖ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.


    ಪ್ರೀತಿಯ ಬಲೆಯಿಂದ ಮಗಳು ಹೊರಬರಲ್ಲ ಎಂದು ಗೊತ್ತಾಗಿ, ಕೊಲೆ ಮಾಡುವ ಉದ್ದೇಶದಿಂದಲೇ ಪ್ರೇಮಿಯ ಜೊತೆಗೆ ಮದುವೆ ಮಾಡುವುದಾಗಿ ನಂಬಿಸಿ, ಅಪ್ರಾಪ್ತೆಯ ಮೂಲಕ ಯುವಕನನ್ನು ಕರೆಯಿಸಿ, ಎರಡು ಪ್ರತ್ಯೇಕ ವಾಹನದಲ್ಲಿ ಇಬ್ಬರುನ್ನು ಕರೆದುಕೊಂಡು ದಾರಿ ಮಧ್ಯ ವಾಹನದಲ್ಲಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ದುರುಳರು. ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಮೂವರನ್ನು ಬಂಧಸಿ, ಉಳಿದವರಿಗೆ ಬಲೆ ಬೀಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
    ಏನಿದು ಘಟನೆ…?
    ಬೇವಿನಮಟ್ಟಿ ಗ್ರಾಮದ ಒಂದು ಜಾತಿಯ ಅಪ್ರಾಪ್ತ(೧೭ ವರ್ಷ ೩ ತಿಂಗಳು) ಹುಡುಗಿ ಅದೇ ಗ್ರಾಮದ ವಿಶ್ವನಾಥ ನೆಲಗಿ(೨೪) ಯುವಕ ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಷಯ ಬಾಲಕಿ ಮನೆಯವರಿಗೆ ಗೊತ್ತಾಗಿ ಹುಡುಗಿಗೆ ಬುದ್ದಿ ಹೇಳಿದ್ದರು. ಹುಡುಗನ ಮೇಲೆ ಹಲ್ಲೆಯನ್ನು ನಡೆಸಿದ್ದರು.
    ಇದರಿಂದ ವಿಶ್ವನಾಥನ ಮನೆಯವರ ಆತಂಕಗೊಂಡು ಯುವಕನಿಗೆ ಬುದ್ದಿ ಹೇಳಿ ಬೇರೆ ಕಡೆಗೆ ದುಡಿಯಲು ಕಳುಹಿಸಿದ್ದರು. ಕಳೆದ ಒಂದು ವರ್ಷದಿಂದ ಯುವಕ ವಿಶ್ವನಾಥ ಕೇರಳದ ಕಾಸರಗೂಡಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಆದರೆ, ಮೊಬೈಲ್ ನಲ್ಲಿ ಪ್ರೇಮಿಗಳು ಸಂಪರ್ಕದಲ್ಲಿ ಇದ್ದರು.
    ಇತ್ತೀಚಿಗೆ ಹುಡುಗಿಯ ಮನೆಯವರು ಮೊಬೈಲ್ ನೋಡುತ್ತಿದ್ದಾಗ ವಿಶ್ವನಾಥನ ಮೆಸೇಜ್ ಬಂದಿತ್ತು. ಇದರಿಂದ ಕೆಂಡಮಂಡಲವಾದ ಮನೆಯವರು ಆಕೆಗೆ ಬಡಿದು ಬುದ್ದಿ ಹೇಳಿದ್ದಾರೆ. ಆಗ ಹುಡುಗಿ ಮಾತ್ರ ವಿಶ್ವನಾಥನ ಜೊತೆಗೆ ಮದುವೆಯಾಗುವುದಾಗಿ ನೇರವಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಹುಡುಗಿ ಮನೆಯವರು ಅನ್ಯ ಜಾತಿ ಯುವಕ ಜೊತೆ ಮದುವೆಯಾದರೆ ತಮ್ಮ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿ, ಇಬ್ಬರನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.


    ತಂದೆಯೇ ಮಾಸ್ಟರ್ ಮೈಂಡ್
    ಹುಡುಗಿ ತಮ್ಮ ಮಾತು ಕೇಳಲ್ಲ ಎನ್ನುವುದು ಖಾತರಿಯಾದ ಬಳಿಕ ಆಕೆಯ ಮಾವ ಬಾಗಪ್ಪ ಎನ್ನುವವರು ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಅಂತ ನಂಬಿಸಿದ್ದೇನೆ. ಆಕೆಯ ಕಡೆಯಿಂದ ಯುವಕನಿಗೆ ಊರಿಗೆ ಬರುವಂತೆ ಕರೆ ಮಾಡಿಸಿದ್ದಾರೆ. ವಿಶ್ವನಾಥ ಕಾಸರಗೂಡನಿಂದ ಗದಗ ಜಿಲ್ಲೆಯ ನರಗುಂದ ಕಡೆ ಬರುವಾಗ. ನಿನ್ನನ್ನು ಆತನ ಜೊತೆ ಬಿಟ್ಟು ಬರೋದಾಗಿ ಹೇಳಿದ ಅಪ್ರಾಪ್ತೆಯ ಮಾವ ಬಾಗಪ್ಪ, ಆಕೆಯ ಸಹೋದರ(ಚಿಕ್ಕಮ್ಮ ಮಗ)ರವಿ ಹುಲ್ಲಣ್ಣವರ, ಮಾವಂದಿರಾದ ಹನುಮಂತ ಮಲ್ನಾಡದ, ಬೀರಪ್ಪ ದಳವಾಯಿ ಆಕೆಯ ಜೊತೆ ತೆರಳಿದ್ದಾರೆ
    ಸೆಪ್ಟೆಂಬರ್ ೩೦ ರಂದು ರಾತ್ರಿ ಒಂದು ಬೊಲೆರೊ ಹಾಗೂ ಟಾಟಾ ಏಸï ತೆಗೆದುಕೊಂಡು ಗದಗ ಜಿಲ್ಲೆಯ ನರಗುಂದ ಕಡೆ ಹೋಗ್ತಾರೆ. ಅಲ್ಲಿ ಬಸ್ ನಿಲ್ದಾಣದಿಂದ ವಿಶ್ವನಾಥನನ್ನು ಬೊಲೆರೊ ವಾಹನದಲ್ಲಿ ಹಾಕಿಕೊಂಡು ಅಕ್ಟೋಬರ್ ೧ ರಂದು ಬೆಳಗಿನ ಜಾವ ಬೊಲೆರೊ ವಾಹನದಲ್ಲಿದ್ದ ವಿಶ್ವನಾಥ ಮರ್ಮಾಂಗಕ್ಕೆ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಟಾಟಾ ಏಸ್‌ನಲ್ಲಿದ್ದ ರಾಜೇಶ್ವರಿಯ ಕತ್ತನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದರೆ. ನಂತರ ವಿಜಯಪುರ ಜಿಲ್ಲೆ ಆಲಮಟ್ಟಿ ರಸ್ತೆ ಸೇತುವೆಯಿಂದ ಕೃಷ್ಣಾ ನದಿಗೆ ಶವ ಎಸೆದಿದ್ದಾರೆ. ಈ ವೇಳೆ ಯಾವುದೇ ಸಾಕ್ಷಿ ಉಳಿಯಬಾರದು ಎಂದು ಅವರಿಬ್ಬ ಒಳವಸ್ತ್ರ ಮಾತ್ರ ಬಿಟ್ಟು ಇಬ್ಬರ ಬಟ್ಟೆಗಳನ್ನು ಕಳಚಿ ಅರೇ ನಗ್ನ ಸ್ಥಿತಿಯಲ್ಲಿ ಶವಗಳನ್ನು ನದಿಗೆ ಎಸೆದಿದ್ದಾರೆ ವಾಪಸ್ಸು ಕೂಡಲಸಂಗಮ ಕ್ರಾಸ್ ಬಳಿ ಬಟ್ಟೆಗಳನ್ನು ಸುಟ್ಟು ಸಾಕ್ಷಿ ನಾಶ ಮಾಡಿದ್ದಾರೆ.

    ಪತ್ತೆ ಆಗಿದ್ದೇಗೆ…?
    ಇಷ್ಟೆಲ್ಲ ಆದ ಮೇಲೆ ಅಕ್ಟೋಬರ್ ೭ ರಂದು ಮಗಳು ಕಿಡ್ನಾಫ್ ಆಗಿದ್ದಾಳೆ ಅಂತ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪರಸಪ್ಪ ದೂರು ನೀಡಿರುತ್ತಾನೆ. ಅತ್ತ ನರಗುಂದ ಬಸ್ ನಿಲ್ದಾಣದಲ್ಲಿ ವಿಶ್ವನಾಥನ ಬ್ಯಾಗ್ ಬಿದ್ದಿದ್ದರಿಂದ ಅಲ್ಲಿನ ಪೊಲೀಸರು ತಪಾಸಣೆ ಮಾಡಿದಾಗ ಕೆಲ ನಂಬರ್ ಲಭ್ಯವಾಗಿವೆ. ಯುವಕನ ತಂಗಿಗೆ ಪೋನ್ ಮಾಡಿದಾಗ ಅವರು ಅಲ್ಲಿಗೆ ಹೋಗಿ ಕಾಣೆ ಆಗಿದ್ದೆನೆಂದು ಯುವಕನ ತಾಯಿ ದೂರು ನೀಡಿದ್ದರು. ಪ್ರಕರಣ ಬೆನ್ನತ್ತಿದ ಬಾಗಲಕೋಟೆ ಪೊಲೀಸರಿಗೆ ಇಬ್ಬರನ್ನು ಕೊಲೆ ಮಾಡಿರುವ ಸಂಶಯ ಬಂದಿದ್ದು, ವಾಹನ ಚಾಲಕ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆ ಪ್ರಕರಣ ಸಂಪೂರ್ಣ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts