More

    ಬೃಹತ್ ಜಾಗೃತಿ ಸಮಾವೇಶ 31ಕ್ಕೆ

    ಚಿತ್ರದುರ್ಗ: ತರಾಸು ರಂಗಮಂದಿರದಲ್ಲಿ ಡಿ. 31ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಬಣದ ಕಾರ್ಯಕರ್ತರಿಂದ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಭೀಮನಕೆರೆ ಶಿವಮೂರ್ತಿ ತಿಳಿಸಿದರು.

    ಶೋಷಿತ ಸಮುದಾಯಗಳನ್ನು ಅಸಮಾನತೆ, ಜಾತೀಯತೆ, ಕೋಮುವಾದದ ವಿರುದ್ಧ ಜಾಗೃತಗೊಳಿಸುವ, ಯಾವ ರಾಜಕೀಯ ನಾಯಕರ ಆಮಿಷಗಳಿಗೆ ಬಲಿಯಾಗದೆ, ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಸ್ವಾಭಿಮಾನಿ ಸಂಕಲ್ಪ ತೊಡಲು ರಾಜ್ಯಮಟ್ಟದಲ್ಲಿ ಅರಿವು ಮೂಡಿಸಲು ಮುಂದಾಗಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಬೌದ್ಧ ಧರ್ಮ ಪ್ರತಿಪಾದಕರು, ಪ್ರಗತಿಪರ ಚಿಂತಕರು, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದರು.

    ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಜಿಲ್ಲಾ ಸಂಚಾಲಕ ಜಿ.ಆರ್.ಪ್ರಭಾಕರ್, ಮುಖಂಡರಾದ ಕೈನಡು ಚಂದ್ರಪ್ಪ, ಆದಿಕಟ್ಟೆ ಕುಮಾರ್, ಮಳಲಿ ಶೇಖರಪ್ಪ, ಟಿ.ಮಾರುತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts