More

    ಬಾಕಿ ವೇತನಕ್ಕ ಆಗ್ರಹಿಸಿ ಪ್ರತಿಭಟನೆ

    ತಿ.ನರಸೀಪುರ: ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಇತ್ತೀಚೆಗೆ ನಿವೃತ್ತರಾಗಿರುವ ಯಡಹಳ್ಳಿ ನೀರುಗಂಟಿ ಸುಬ್ಬಪ್ಪ ತಾಲೂಕಿನ ಬೀಡನಹಳ್ಳಿ ಗ್ರಾಪಂ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಯಡಹಳ್ಳಿ ಗ್ರಾಮದಲ್ಲಿ 8 ವರ್ಷಗಳಿಂದ ನೀರುಗಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಸುಬ್ಬಪ್ಪ ಅವರಿಗೆ 14 ತಿಂಗಳ ವೇತನ ಬಾಕಿ ಇದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಚೇರಿಗೆ ಅಲೆದಾಟ ನಡೆಸಿದರೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.

    ಜೀವನಾಂಶಕ್ಕೆ ಇದನ್ನೇ ನಂಬಿದ್ದು, ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕಚೇರಿ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಪಂಚಾಯಿತಿಯ ಕೆಲ ಸದಸ್ಯರು ಸುಬ್ಬಪ್ಪ ಅವರನ್ನು ಸಮಾಧಾನಪಡಿಸಿ ಶೀಘ್ರ ಬಾಕಿ ವೇತನ ಕೊಡಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts