More

    ಪ್ರಿಯಾಂಕ್ ಖರ್ಗೆ ಸೋಲು ಖಚಿತ ಎಂದ ಚಿಂಚನಸೂರ್​

    ಯಾದಗಿರಿ: ಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸೋಲು ಕಟ್ಟಿಟ್ಟ ಬುತ್ತಿ. ಏನೇ ತಿಪ್ಪರಲಾಗ ಹೊಡೆದರೂ ಖರ್ಗೆ ಆಟ ನಡೆಯದು. ಅವರ ಖೇಲ್ ಖತಮ್ ಆಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ
    ಪ್ರಿಯಾಂಕ್ ಖರ್ಗೆ ಮತ್ತವರ ಬೆಂಬಲಿಗರು ಬಿಜೆಪಿ ಕಾರ್ಯಕರ್ತರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮವರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿಸುತ್ತಿದ್ದಾರೆ. ಅವರ ಗುಂಡಾಗರ್ದಿ ಪಾಲಿಟಿಕ್ಸ್ಗೆ ಬಗ್ಗುವವರು ನಾವಲ್ಲ. ಅವರಿಗೆ ಹೇಗೆ ಟಕ್ಕರ್ ನೀಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಚಿತ್ತಾಪುರದಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ. ನಾನು ಮೂರು ಸಲ ಅಲ್ಲಿ ಗೆದ್ದಿದ್ದೇನೆ. ನಾವೆಲ್ಲರೂ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದ್ದೇವೆ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಪ್ರಿಯಾಂಕ್ ಸೋಲುವುದು ಸಹ ಅಷ್ಟೇ ಸತ್ಯ ಎಂದು ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೂಂಕರಿಸಿದರು.
    ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರಾಗಿದ್ದ ವೇಳೆ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ದೊಡ್ಡ ವಿಷಯವೇ ಆಗಿರಲಿಲ್ಲ. ಅವರು ಮನಸ್ಸು ಮಾಡಿದರೆ ಐದೇ ನಿಮಿಷದಲ್ಲಿ ಈ ಕೆಲಸ ಆಗುತ್ತಿತ್ತು. ಎರಡು ಸಲ ನಾನು ಖರ್ಗೆ ಮುಂದೆ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಉರುಳು ಸೇವೆ ಮಾಡಿದರೂ ಕನಿಕರ ಬರಲಿಲ್ಲ. ಸಮಾಜದ ಹಿತದಿಂದ ನಾನು ಬಿಜೆಪಿ ಸೇರಿದೆ. ಬರುವ ವಿಧಾನಸಭೆ ಚುನಾವಣೆಯೊಳಗೆ ಸಮಾಜವನ್ಬು ಎಸ್ಟಿಗೆ ಸೇರಿಸುವುದಾಗಿ ಹೇಳಿದರು.

    ಕೋಲಿ ಸಮಾಜವನ್ನು ಕಡೆಗಣಿಸಿದ ಕಾರಣಕ್ಕೆ ನಾವೆಲ್ಲರೂ ಸೇರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಂಕಲ್ಪ ಮಾಡಿ ಅದನ್ನು ಸಾಧಿಸಿಯೇ ತೋರಿಸಿz್ದÉÃವೆ. ಈಗ ಸೋಲುವ ಸರದಿ ಅವರ ಪುತ್ರ ಪ್ರಿಯಾಂಕ್ ಅವರದು. ಪ್ರಿಯಾಂಕ್ ಏನೇ ಮಾಡಿದರೂ ಗೆಲ್ಲಲಾಗದು. ಚಿತ್ತಾಪುರದ ಜನರು ಬದಲಾವಣೆ ಬಯಸಿz್ದÁರೆ.
    | ಬಾಬುರಾವ್ ಚಿಂಚನಸೂರ್
    ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts