ಅಥಣಿ : ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸೌಲಭ್ಯ ಕಲ್ಪಿಸುವುದಕ್ಕಾಗಿ ಆರೋಗ್ಯ ಅಮೃತ ಅಭಿಯಾನ ರೂಪಿಸಲಾಗಿದೆ ಎಂದು ಅಮೃತ ಅಭಿಯಾನ ಅಧಿಕಾರಿ ಭಾರತಿ ಬಿಜಾಪುರೆ ಹೇಳಿದರು.
ಅಥಣಿ ತಾಲೂಕಿನ ಲಕ್ಷಿ$್ಮವಾಡಿ ಗ್ರಾಮದಲ್ಲಿ ಅನಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಗ್ರಾಪಂ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಿ ಅವರು ಮಾತನಾಡಿದರು. ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಅಭಿಯಾನ ಹಮ್ಮಿಕೊಂಡು, ಜನರ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಕರೊನಾ ಬೂಸ್ಟರ್ ಡೋಸ್ ನೀಡುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆಯಬೇಕು ಎಂದರು. ಒಟ್ಟು 192 ಜನರಿಗೆ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಯಿತು. ಪಿಡಿಒ ಎಸ್.ಕೆ.ಅಡಹಳ್ಳಿ, ಚನ್ನಪ್ಪ ನಂದಿವಾಲೆ, ಆರೋಗ್ಯ ಸಹಾಯಕಿ ಸುನಿತಾ ಸಣ್ಣಕ್ಕಿ, ಅರ್ಪಿತಾ ನಂದಗಾಂವ, ಮಲ್ಲಮ್ಮ ಲಕ್ಕವಡ್ಡರ, ಕಮಲಾ ಇಗಳಿ, ರಾಮಗೌಡ ಸರಬಡಗಿ, ಸುರೇಶ ಸತ್ತಿ ಇತರರಿದ್ದರು.