More

    ಪೊಲೀಸ್ ಠಾಣೆಯಲ್ಲಿ ಪ್ರೇಮಿಗಳ ವಿವಾಹ

    ಬಂಕಾಪುರ: ಲಾಕ್​ಡೌನ್ ಮಧ್ಯೆ ಪ್ರಿಯಕರನನ್ನು ಹುಡುಕಿಕೊಂಡು ಬಂದ ಯುವತಿಗೆ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಮದುವೆ ಮಾಡಿಸಿದ ಅಪರೂಪದ ಘಟನೆ ನಡೆದಿದೆ.

    ಲಕ್ಷೆ್ಮೕಶ್ವರ ತಾಲೂಕಿನ ಯತ್ನಳ್ಳಿ ಗ್ರಾಮದ ನಿರ್ಮಲಾ ಕಲ್ಮನಿ ತನ್ನ ಪ್ರಿಯಕರ ರವಿ ಯಲಿಗಾರನನ್ನು ಹುಡುಕಿಕೊಂಡು ಬಂಕಾಪುರಕ್ಕೆ ಬಂದಿದ್ದಳು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ನಂತರ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಳ್ಳುವ ತೀರ್ವನಕ್ಕೆ ಬಂದಿದ್ದರು. ಆದರೆ, ಲಾಕ್​ಡೌನ್ ಘೊಷಣೆಯಾದ ಕಾರಣ ಇಬ್ಬರೂ ಸ್ವಗ್ರಾಮಗಳಿಗೆ ಮರಳಿದ್ದರು.

    ಯತ್ನಳ್ಳಿ ಗ್ರಾಮದ ಯುವತಿಯೊಂದಿಗೆ ಯುವಕನ ಮನೆಯವರು ಮದುವೆ ಮಾಡಿಕೊಡಲು ವಿರೋಧ ವ್ಯಕ್ತಪಡಿಸಿದ್ದರು. ಶುಕ್ರವಾರ ಯುವತಿ ತನ್ನ ಇಬ್ಬರು ಸಹೋದರರ ಜತೆಗೆ ಯುವಕನ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಆದರೆ, ಯುವಕ ಸಮ್ಮತಿಸದೆ ಇದ್ದಾಗ ಪೊಲೀಸರ ಮೊರೆ ಹೋಗಿದ್ದಾಳೆ. ಪ್ರೇಮಿ ರವಿ ಮತ್ತು ಆತನ ತಂದೆಯನ್ನು ಠಾಣೆಗೆ ಕರೆಯಿಸಿದ ಪೊಲೀಸರು ಹಾಗೂ ಹಿರಿಯರು ಬುದ್ಧಿವಾದ ಹೇಳಿ ಮನವೊಲಿಸಿದರು. ನಂತರ ಠಾಣೆಯ ಆವರಣದಲ್ಲಿ ಹಿರಿಯರ ಸಮ್ಮುಖದಲ್ಲಿ ಯುವತಿಗೆ ತಾಳಿ ಕಟ್ಟಿಸಿ ಸರಳ ವಿವಾಹ ನೆರವೇರಿಸಿದ್ದಾರೆ. ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಎಚ್.ಎ. ಮಳಗಿ, ಬಸವರಾಜ ಕಟ್ಟಿಮನಿ, ಪ್ರಮೋದ ಚಲವಾದಿ, ಜಗದೀಶ ಹುರಳಿ, ಅಶೋಕ ಕಾಳೆ, ಸುರೇಶ ಹರಿಜನ, ಮಾರುತಿ ಬಣಕಾರ, ಮಂಜುನಾಥ ಇಂಗಳಗಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts