ಚಿತ್ರದುರ್ಗ: ನಗರದ ಎಸ್ಆರ್ಎಸ್ ಪಪೂ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪಪೂ ಇಲಾಖೆ, ಜಿಲ್ಲಾ ಅರ್ಥಶಾಸ್ತ್ರ ವೇದಿಕೆ, ಕಾಲೇಜಿನಿಂದ ಬುಧವಾರ ನಡೆದ ಪ್ರಶ್ನೆ ಪತ್ರಿಕೆ, ನೀಲನಕ್ಷೆ ತಯಾರಿಸುವ ತರಬೇತಿ ಕಾರ್ಯಾಗಾರವನ್ನು ಇಲಾಖೆಯ ದಾವಣಗೆರೆ ಉಪನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ ಉದ್ಘಾಟಿಸಿದರು.
ಪರೀಕ್ಷಾಂಗ ನಿವೃತ್ತ ಜಂಟಿ ನಿರ್ದೇಶಕ ಪಿ.ಎನ್.ಕೃಷ್ಣಪ್ರಸಾದ್, ಎಸ್ಆರ್ಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ರವಿ, ನಿವೃತ್ತ ಪ್ರಾಚಾರ್ಯ ಎಸ್.ಷಡಾಕ್ಷರಿ, ಉಪನ್ಯಾಸಕರಾದ ಬಷೀರ್, ವನಜಾಕ್ಷಿ, ಜಿಲ್ಲಾ ಅರ್ಥಶಾಸ್ತ ವೇದಿಕೆಯ ಟಿ.ಪಿ.ಜ್ಞಾನಮೂರ್ತಿ, ಎಸ್.ಲಕ್ಷ್ಮ್ಮಣ, ಹನುಮಂತರಾಯ, ಡಿ.ಗುರುಸ್ವಾಮಿ, ವಿ.ಚನ್ನಬಸಪ್ಪ, ಎಚ್.ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿ ಬಿ.ಎಂ.ಜಗದೀಶ್, ಪ್ರಾಚಾರ್ಯ ಗುರುಮೂರ್ತಿ ಇತರರಿದ್ದರು.