ಆಲ್ದೂರು: ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಸರ್ವೆ ನಂಬರ್ 167/1ರಲ್ಲಿ ನಿವೇಶಕ್ಕಾಗಿ ಶೆಡ್ ಹಾಕಿಕೊಂಡು ಹೋರಾಟ ಮಾಡುತ್ತಿರುವವರನ್ನು ಮಂಗಳವಾರ ಚಿಕ್ಕಮಗಳೂರು ತಹಸೀಲ್ದಾರ್ ವಿನಯ್ ಸಾಗರ್ ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಮಾಚಗೊಂಡನಹಳ್ಳಿ, ಸತ್ತಿಹಳ್ಳಿ, ಯಲಗುಡಿಗೆ ಗ್ರಾಮದ ಸುಮಾರು 70 ನಿವೇಶನ ರಹಿತ ಕುಟುಂಬಗಳು ಸುಮಾರು 5 ವರ್ಷಗಳಿಂದ ಶೆಡ್ ನಿರ್ವಿುಸಿಕೊಂಡಿದ್ದಾರೆ. ಇವರೊಂದಿಗೆ ತಹಸೀಲ್ದಾರ್ ಮಾತುಕತೆ ನಡೆಸಿದರು. ಕಂದಾಯ ಇಲಾಖೆ, ಸತ್ತಿಹಳ್ಳಿ ಗ್ರಾಪಂ, ಅರಣ್ಯ ಇಲಾಖೆಯವರು ರ್ಚಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಹೋರಾಟಗಾರ ವಿನೋದ್ ವಿಜಯವಾಣಿಯೊಂದಿಗೆ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗೌತಮ್ ಬಗಾದಿ ಅವರು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ನಂತರ ಶಾಸಕ ಎಂ.ಪಿ.ಕುಮಾರಸ್ವಾಮಿ ಮೂರು ಬಾರಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖೆಯವರು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.