More

    ನಮ್ಮದು ಅಧ್ಯಾತ್ಮ ತತ್ವದ ಅಳಿವಿಲ್ಲದ ನಾಡು

    ಬೀರೂರು: ಆದರ್ಶ, ಗೌರವ, ಅಧ್ಯಾತ್ಮ ತತ್ವದ ಅಳಿವಿಲ್ಲದ ನಾಡು ನಮ್ಮದು ಎಂದು ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.

    ಶ್ರೀರಾಮಪುರಂ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯದಲ್ಲಿ ಶುಕ್ರವಾರ ಭಾರತಮಾತಾ ಪೂಜ ಸಮಿತಿ ರಾಮ ಮಂದಿರ ನಿರ್ವಣದ ಸಮರ್ಪಣಾ ಅಭಿಯಾನದ ಚಾಲನೆಗೆ ಪೂರ್ವಭಾವಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಧಾರ್ವಿುಕ ತಳಹದಿ ಜತೆಗೆ ವೈಚಾರಿಕತೆ, ಸಹಿಷ್ಣುತೆ ಭಾವಗಳಿಂದ ಕಟ್ಟಿದ ದೇಶ ನಮ್ಮದು. ಭಾರತೀಯ ಪರಂಪರೆಯಲ್ಲಿ ದೇಶ ಮೊದಲು, ಸ್ವಹಿತ ನಂತರ. ದೇಶ ಮತ್ತು ಸಂಸ್ಕೃತಿ ಶಾಶ್ವತವಾಗಿರಬೇಕಾದರೆ ನಮ್ಮ ಆತ್ಮಶಕ್ತಿ ಬಳಸಿ ಜಾಗೃತರಾಗಬೇಕು. ಭಾರತೀಯತೆ ಅಸ್ಮಿತೆ ಪ್ರತೀಕವಾಗಿರುವ ಶ್ರೀರಾಮನನ್ನು ಮನೋಮಂದಿರದಲ್ಲಿ ಸ್ಥಾಪಿಸಿ,ಆತ್ಮದಲ್ಲಿ ರಾಮಕಥೆ ಸ್ಮರಣೆ ಮೂಲಕ ಮತ್ತೆ ಸನಾತನ ಭಾರತ ಕಟ್ಟುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

    ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಶ್ರೀರಾಮ ಮಂದಿರ ದೇಶದ ಅಭಿಮಾನವಾಗಿ ಮೂಡಿಬರಲಿ ಎಂದು ಆಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts