ರಾಮದುರ್ಗ, ಬೆಳಗಾವಿ : ತಂತ್ರಜ್ಞಾನವನ್ನು ಅಧ್ಯಯನಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕು. ಪುಸ್ತಕಗಳು ದೊರೆಯದಿದ್ದಾಗ ತಂತ್ರಜ್ಞಾನದ ಮೊರೆ ಹೋಗಿ ಮಾಹಿತಿ ಪಡೆದು ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದು ಪಿಎಸ್ಐ ಕಿರಣ ಸತ್ತಿಗೇರಿ ಹೇಳಿದರು. ಪಟ್ಟಣದ ಕೋರ್ಟ್ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯನ್ನು ಅಲ್ಲಗಳೆಯುವಂತಿಲ್ಲ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀೆಗೆ ಪೂರಕವಾದ ಪುಸ್ತಕಗಳನ್ನು ನಿರಂತರವಾಗಿ ಅಧ್ಯಯನ ಮಾಡಿದಾಗ ಮಾತ್ರ ಉನ್ನತ ಗುರಿ ತಲುಪಲು ಸಾಧ್ಯ.ಕಂಪ್ಯೂಟರ್ ಜ್ಯಾನವನ್ನು ಸರ್ಕಾರದ ಉದ್ಯಮವಾದ ಕಿಯೋನಿಕ್ಸ್ ತರಬೇತಿ ಕೇಂದ್ರದಲ್ಲಿ ಅಧಿಕೃತ ತರಬೇತಿ ನೀಡುತ್ತಿರುವುದು ಶ್ಲಾನೀಯ ಎಂದರು. ಪೊಲೀಸ್ ವಿಜಯಕುಮಾರ ರಾಠೋಡ ಮಾತನಾಡಿ, ಪರೀಾ ತಯಾರಿ ಮಾಡುವ ಸಂದರ್ಭದಲ್ಲಿ ಪೂರಕ ಪ್ರಶ್ನೆಪತ್ರಿಕೆಗಳ ಸಂಗ್ರಹ, ಅದಕ್ಕೆ ತಕ್ಕಂತೆ ಪುಸ್ತಕಗಳು, ಆನ್ಲೈನ್ ತಂತ್ರಜ್ಞಾನದ ಮೂಲಕ ಮಾಹಿತಿ ಸಂಗ್ರಹಿಸಿ, ವ್ಯವಸ್ಥಿತವಾಗಿ ನಿರಂತರ ಪರಿಶ್ರಮದಿಂದ ಓದುದಾಗ ಗುರಿ ತಲುಪಲು ಸಾಧ್ಯವಿದೆ ಎಂದರು. ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ವ್ಯವಸ್ಥಾಪಕ ಆನಂದ ಲಮಾಣಿ, ಬಸವರಾಜ ಕೋಣನ್ನವರ, ಬಾಬುರೆಡ್ಡಿ ಹೆಬ್ಬಳ್ಳಿ, ನಾಗರಾಜ ಭಜಂತ್ರಿ, ತರಬೇತಿ ಕೇಂದ್ರದ ಮಾರ್ಗದರ್ಶಕರಾದ ಸ್ಪೂರ್ತಿ ಶೆಟ್ಟರ, ಕೀರ್ತಿ ಶೆಟ್ಟರ ಇತರರಿದ್ದರು.