More

    ಟಿಪ್ಪು ಜಯಂತಿ ಆಚರಿಸಿದ ಪಾಲಿಕೆ ವಿಪಕ್ಷ ನಾಯಕನಿಗೆ ನೋಟಿಸ್

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರ ಕೊಠಡಿಯಲ್ಲಿ ಗುರುವಾರ ಟಿಪ್ಪು ಜಯಂತಿ ಆಚರಿಸಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಪರಿಷತ್ ಕಾರ್ಯದರ್ಶಿ, ವಿಪಕ್ಷ ನಾಯಕ ದೋರಾಜ ಮಣಿಕುಂಟ್ಲಗೆ ನೋಟಿಸ್ ನೀಡಿದ್ದಾರೆ.

    ಸರ್ಕಾರಿ ಕಚೇರಿಗಳಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು 2020ರಿಂದ ರದ್ದುಗೊಳಿಸಲಾಗಿದೆ. ತಾವು ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ್ದೀರಿ. 3 ದಿನಗಳೊಳಗೆ ಪಾಲಿಕೆ ಮೇಯರ್​ಗೆ ಉತ್ತರ ನೀಡಬೇಕು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

    ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಇಮ್ರಾನ್ ಎಲಿಗಾರ, ಪ್ರಕಾಶ ಕುರಹಟ್ಟಿ, ಶಂಭು ಸಾಲಿಮನಿ, ಮಾಜಿ ಸದಸ್ಯ ಮೋಹನ ಹಿರೇಮನಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಇತರರು ಪಾಲ್ಗೊಂಡಿದ್ದರು. ಕಚೇರಿಯಲ್ಲಿ ಟಿಪ್ಪು ಭಾವಚಿತ್ರವಿಟ್ಟು ಹೂ ಮಾಲೆ ಹಾಕಿ ಪೂಜೆ ಸಲ್ಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts