More

    ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಪದಗ್ರಹಣ

    ಗೋಣಿಕೊಪ್ಪ: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಆಡಳಿತ ಮಂಡಳಿಗೆ ಮಂಗಳವಾರ ಪದಗ್ರಹಣ ಸ್ವೀಕರಿಸಲಾಯಿತು.

    ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮುಕ್ಕಾಟಿರ ನೀತ್ ಅಯ್ಯಪ್ಪ, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ, ಖಜಾಂಚಿ ಬೊಜ್ಜಂಗಡ ಚೆಂಗಪ್ಪ, ಉಪಾಧ್ಯಕ್ಷರಾಗಿ ಎಚ್.ಆರ್. ಸತೀಶ್, ಟಿ.ಜೆ. ಆಂಟೋನಿ, ಎ. ಎಂ. ಬೋಪಣ್ಣ, ಪಿ.ಪಿ.ಬಿದ್ದಪ್ಪ, ಕೆ.ಯು.ತಿಮ್ಮಯ್ಯ, ಪಿ.ಪಿ.ಬೋಪಣ್ಣ, ಜಂಟಿ ಕಾರ್ಯದರ್ಶಿ ಟಿ.ಎಸ್.ಸುಜಿತ್, ನಿರ್ದೇಶಕರಾಗಿ ಎಂ.ಪಿ.ಬೋಪಣ್ಣ, ಪಿ.ಬಿ.ಗೌತಮ್, ಸಿ.ಡಿ.ಮುತ್ತಪ್ಪ, ಜಿ.ಪಿ.ಸ್ವಾಮಿ, ಟಿ.ಜಿ.ಲಿಖಿತ್‌ಕುಮಾರ್ ಪದಗ್ರಹಣ ಸ್ವೀಕರಿಸಿದರು.

    ನಿಕಟಪೂರ್ವ ಅಧ್ಯಕ್ಷ ಅಪ್ಪಡೇರಂಡ ದಿನೇಶ್ ನಿಯೋಜಿತ ಅಧ್ಯಕ್ಷ ನೀತ್ ಅಯ್ಯಪ್ಪಗೆ ಅಧಿಕಾರ ಹಸ್ತಾಂತರ ಮಾಡಿದರು. ರಾಷ್ಟ್ರೀಯ ಜೆಸಿಐ ಉಪಾಧ್ಯಕ್ಷ ಭರತ್ ಎನ್.ಆಚಾರ್ಯ, ವಲಯಾಧ್ಯಕ್ಷೆ ಯಶಸ್ವಿನಿ, ಸೀನಿಯರ್ ಮೆಂಬರ್ ಅಸೋಸಿಯೇಷನ್ ಉಪಾಧ್ಯಕ್ಷ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ವಲಯ ಉಪಾಧ್ಯಕ್ಷೆ ಆಶಾ ಜೈನ್, ಘಟಕದ ನಿಕಟಪೂರ್ವ ಅಧ್ಯಕ್ಷರಾದ ವನಿತ್‌ಕುಮಾರ್, ಬಿ. ಇ. ಕಿರಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts