ಹೊನ್ನಾವರ: ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರ ಪ್ರಥಮ ಪುಣ್ಯ ಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಜಲವಳ್ಳಿಯ ಹಿರೇಹಿತ್ತಲದಲ್ಲಿ ಫೆ. 22ರಂದು ನಡೆಯಲಿದೆ.
ಸಂಜೆ 7 ಗಂಟೆಗೆ ಕಾರ್ಯಕ್ರಮವನ್ನು ಸಾಹಿತಿ ಸುಮುಖಾನಂದ ಜಲವಳ್ಳಿ ಉದ್ಘಾಟಿಸುವರು. ಪತ್ರಕರ್ತ ಜಿ.ಯು. ಭಟ್ ಅಧ್ಯಕ್ಷತೆ ವಹಿಸುವರು. ಸಮಾಜ ಸೇವಕ ಪಿ.ಎಸ್. ಭಟ್ ಉಪ್ಪೋಣಿ, ವಕೀಲ ಎಂ.ಎನ್. ಸುಬ್ರಹ್ಮಣ್ಯ, ಪಿ.ಟಿ. ನಾಯ್ಕ ಮೂಡ್ಕಣಿ, ದೇವರಾಯ ನಾಯ್ಕ ಜಲವಳ್ಳಿ, ಶ್ರೀಧರ ನಾಯ್ಕ ಜಲವಳ್ಳರ್ಕ, ಟಿ.ಟಿ. ನಾಯ್ಕ ಮೂಡ್ಕಣಿ, ಯಕ್ಷಗಾನ ಕಲಾವಿದ ಗಣೇಶ ನಾಯ್ಕ ಮುಗ್ವಾ ಅತಿಥಿಗಳಾಗಿ ಪಾಲ್ಗೊಳ್ಳುವರು.
ಪ್ರಸಂಗಕರ್ತ ಹಾಗೂ ಭಾಗವತ ಪ್ರಸಾದ ಕುಮಾರ ಮೊಗೆಬೆತ್ತು ಅವರಿಗೆ ಜಲವಳ್ಳಿ ವೆಂಕಟೇಶ ರಾವ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಜಲವಳ್ಳಿಯ ಕಲಾಧರ ಯಕ್ಷಗಾನ ತರಬೇತಿ ಶಾಲೆ ವಿದ್ಯಾರ್ಥಿಗಳಿಂದ ‘ಕಂಸವಧೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.