More

    ಛತ್ರಪತಿ ಶಿವಾಜಿ ಮಹಾರಾಜರ ಜೀವನ ಅನಾವರಣ

    ಕಲಘಟಗಿ: ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಾ.8ರಂದು ರಾತ್ರಿ 9 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನೊಳಗೊಂಡ ಕನ್ನಡದ ಐತಿಹಾಸಿಕ ಕ್ರಾಂತಿಕಾರಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

    ಪಟ್ಟಣದ ಛತ್ರಪತಿ ಶಿವಾಜಿ ಯುವಕ ಮಂಡಳದವರು ಹಳಿಯಾಳ ತಾಲೂಕಿನ ತೇರಗಾಂವನ ಶ್ರೀಕಲ್ಮೇಶ್ವರ ಕೃಪಾ ಪೋಷಿತ ನಾಟ್ಯ ಸಂಘದವರ ಆಶ್ರಯದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಯುವಕ ಮಂಡಳದ ತಾನಾಜಿ ಮೊತೇನವರ, ಪ್ರಕಾಶ ಹುಲಿಹೊಂಡ, ಬಾಹುಬಲಿ ಅಕ್ಕಿ, ರಾಘವೇಂದ್ರ ಹುಲಿಹೊಂಡ, ಅರುಣ ಮೊತೇನವರ, ಹರೀಶ ಗುಡಿಹಾಳ, ಕೃಷ್ಣಾ ತಹಶೀಲ್ದಾರ, ಬಸವರಾಜ ಕಡ್ಲಾಸ್ಕರ, ಪರಶುರಾಮ ಕಾರೇನವರ, ನವೀನ ತಹಶೀಲ್ದಾರ, ಬಾಬು ಬಾವಕರ, ರಾಜು ದೊಡ್ಡಮನಿ ಅವರು ನಾಟಕ ಪ್ರದರ್ಶನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

    ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಉದ್ಘಾಟಿಸುವರು. ಶಾಸಕ ಸಿ.ಎಂ. ನಿಂಬಣ್ಣವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ, ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಶ್ರೀಕಾಂತ ಘೂಟ್ನೇಕರ, ಮಾಜಿ ಸದಸ್ಯ ನಾಗರಾಜ ಛಬ್ಬಿ, ಎಪಿಎಂಸಿ ಅಧ್ಯಕ್ಷ ರಜನಿಕಾಂತ ಬಿಜವಾಡ ಸೇರಿ ತಾಲೂಕಿನ ಅನೇಕ ಅಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು, ವರ್ತಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಸಂಘಟಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts