ಅರಕಲಗೂಡು: ತಾಲೂಕಿನ ಹೆಬ್ಬಾಲೆ ಬಳಿ ಮಂಗಳವಾರ ರಾತ್ರಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ನಿಯಂತ್ರ ತಪ್ಪಿ ಪಲ್ಟಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಅರಕಲಗೂಡಿನಿಂದ ನರಸಿನಕುಪೆ,್ಪ ಬೋಳಕ್ಯಾತನಹಳ್ಳಿ ಮಾರ್ಗವಾಗಿ ಗೊರೂರು ಕಡೆಗೆ ಚಲಿಸುತ್ತಿದ್ದ ಬಸ್ ಹೆಬ್ಬಾಲೆ ಬಳಿ ನಿಯಂತ್ರಣ ತಪ್ಪಿ ರಸ್ತೆಬದಿಯ ಹಳ್ಳಕ್ಕೆ ಮಗುಚಿ ಬಿದ್ದಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿ ಪ್ರಯಾಣಿಕರಲ್ಲಿ ನಾಲ್ವರಿಗೆ ಚಿಕ್ಕಪುಟ್ಟ ಪೆಟ್ಟು ಬಿದ್ದಿದ್ದು ಎಲ್ಲರೂ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ಅತ್ನಿ ಗ್ರಾಮದ ಆನಂದ (38), ದರ್ಶನ್ (19), ವಸಂತ ಕುಮಾರ್ (38) ಮತ್ತು ಹೆಬ್ಬಾಲೆ ಗ್ರಾಮದ ಅಶ್ವಥ್ ಅವರು ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.