More

    ಗ್ರಾಮಾಂತರ ಬಸವ ಜಯಂತಿ ನಾಳೆ

    ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಲಿಂಗೈಕ್ಯ ಮರಿದೇವರು ಸ್ವಾಮೀಜಿ ಅವರ 14ನೇ ಹಾಗೂ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಾಗೂ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಆ.29ರಂದು ಆಯೋಜಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಹೇಳಿದರು.

    ಮಠದ ಆವರಣದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ವಹಿಸಲಿದ್ದು, ಕಂಚುಗಲ್ ಬಂಡೆಮಠದ ಬಸವಲಿಂಗಸ್ವಾಮೀಜಿ ನುಡಿನಮನ ಸಲ್ಲಿಸಲಿದ್ದಾರೆ. ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಗುರುವಣ್ಣಾದೇವರ ಮಠದ ನಂಜುಂಡಸ್ವಾಮಿ, ಕದಂಬ ಜಂಗಮ ಮಠ, ವೈದ್ಯನಾಥಪುರದ ರೇಣುಕಾಶಿವಾಚಾರ್ಯಸ್ವಾಮೀಜಿ, ರಂಭಾಪುರಿ ಶಾಖಾಮಠ ತೆಂಡೇಕೆರೆಯ ಗಂಗಾಧರ ಶಿವಾಚಾರ್ಯಸ್ವಾಮೀಜಿ, ಪಟ್ಟದ ಹೊಸಮಠದ ಸಿದ್ದಲಿಂಗಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಸ್ವತಂತ್ರ ಚೆನ್ನವೀರಸ್ವಾಮಿ ಹಾಗೂ ದಾಸೋಹ ಮಠ ಆಲಕೆರೆಯ ನಂಜುಂಡಸ್ವಾಮಿ ಸಮ್ಮುಖ ವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಹೊನಗಾನಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ, ಶ್ರೀಮಠದ ಟ್ರಸ್ಟಿ ಶಂಕರನಂಜಪ್ಪ, ಆಡಳಿತ ಮಂಡಳಿಯ ಮಹದೇವಪ್ಪ, ಕೆ.ಎಲ್.ಆನಂದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts