ಬೆಳಗಾವಿ: ಸಾಂಬ್ರಾದಲ್ಲಿರುವ ಭಾರತೀಯ ವಾಯುದಳ, ಏರ್ಮನ್ ತರಬೇತಿ ಶಾಲೆಯ ಅಧಿಕಾರಿಗಳು ಮತ್ತು ಪ್ರಶಿಣಾರ್ಥಿಗಳು ನಗರದ ಕೇಂದ್ರ ಗ್ರಂಥಾಲಯಕ್ಕೆ ಶನಿವಾರ ಶೈಣಿಕ ಭೇಟಿ ನೀಡಿದರು. ದೀಪಕ ಭಾರದ್ವಾಜ್, ಬಿ.ಬಿ. ದ್ವಿವೇದಿ, ಎಸ್. ಅಭಿಷೇಕ ಬಚ್ಚನ್ ಹಾಗೂ 29 ಭಾರತೀಯ ಪ್ರಶಿಣಾರ್ಥಿಗಳು ಮತ್ತು 4 ಜನ ಶ್ರೀಲಂಕಾ ಏರ್ಫೋರ್ಸ್ ಸಿಬ್ಬಂದಿ ಗ್ರಂಥಾಲಯ ನಿರ್ವಹಣೆ ಮತ್ತು ವಿವಿಧ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಗ್ರಂಥಾಲಯಗಳ ನಿರ್ವಹಣೆ ಮತ್ತು ಕೆಲಸ ಕಾರ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಸದರಿ ತರಬೇತಿ ಅಂಗವಾಗಿ ಈ ತಂಡ ಕೆಂದ್ರ ಗ್ರಂಥಾಲಯ ಮತ್ತು ಶಹಾಪುರದ ರವೀಂದ್ರ ಕೌಶಿಕ್ ಇ&ಗ್ರಂಥಾಲಯಕ್ಕೆ ಭೇಟಿ ನೀಡಿ, ಕಾರ್ಯ ನಿರ್ವಹಣೆ ಬಗ್ಗೆ, ಸಾರ್ವಜನಿಕ ಸೇವೆಗಳು, ಗ್ರಂಥ ಸಂಪಾದನೆ, ವರ್ಗೀಕರಣ ಪ್ರಕ್ರಿಯೆ ಮತ್ತು ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಬಗ್ಗೆ ಮಾಹಿತಿ ಪಡೆದರು.
ಗ್ರಂಥಾಲಯ ಉಪನಿರ್ದೇಶಕ ರಾಮಯ್ಯ ಅವರು, ಗ್ರಂಥಾಲಯ ಬಜೆಟ್, ಖರೀದಿ ಪ್ರಕ್ರಿಯೆ ಮತ್ತು ಅನೇಕ ಆಡಳಿತಾತ್ಮಕ ವಿಷಯಗಳ ಕುರಿತು ಮಾಹಿತಿ ನೀಡಿದರು. ಜತೆಗೆ ದೇಶಕ್ಕೆ ತಮ್ಮ ಸೇವೆ ಬಗ್ಗೆ ಧನ್ಯವಾದ ಅರ್ಪಿಸಿದರು. ಸಿಬ್ಬಂದಿ ಪ್ರಕಾಶ ಇಚಲಕರಂಜಿ, ಎನ್.ವೈ. ಪಾಟೀಲ ಅವರು ಗ್ರಂಥಾಲಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಶಾಲೆಯ ಅಧಿಕಾರಿಗಳಾದ ದೀಪಕ ಭಾರದ್ವಾಜ್ ಅವರು ನಿಗದಿತ ಚೌಕಟ್ಟಿನೊಳಗೆ ಲಭ್ಯ ಸೌಲಭ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಂಥಾಲಯವನ್ನು
ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ ಕುರಿತು ಇಲಾಖೆಗೆ, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ನಗರ ಕೇಂದ್ರ ಗ್ರಂಥಾಲಯ ಎಲ್ಲ ಸಿಬ್ಬಂದಿ ಇದ್ದರು.