More

    ಗಸ್ತು ವೇಳೆ ಸಿಕ್ಕಿಬಿದ್ದ ಬೈಕ್ ಕಳ್ಳ

    ಹುಮನಾಬಾದ್: ಪಟ್ಟಣದಲ್ಲಿ ಬೈಕ್ ಕಳ್ಳನನ್ನು ಶನಿವಾರ ಬಂಧಿಸಿದ ಪೊಲೀಸರು, ಒಂಬತ್ತು ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದ ನರಸಿಂಗ ವಗ್ಗೆ (23) ಬಂಧಿತ. ಬೈಕ್ ಕಳವು ಪ್ರಕರಣ ಹೆಚ್ಚುತ್ತಿದ್ದರಿಂದ ಎಸಿಪಿ ಶಿವಾಂಶು ರಜಪೂತ ಹಾಗೂ ಸಿಪಿಐ ಶರಣಬಸಪ್ಪ ಕೋಡ್ಲಾ ಮಾರ್ಗದರ್ಶನದಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿತ್ತು. ಅದರಂತೆ ಅಂಬೇಡ್ಕರ್ ವೃತ್ತದ ಹತ್ತಿರ ಶನಿವಾರ ನಸುಕಿನ ಜಾವ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನರಸಿಂಗ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಾನು ಮತ್ತು ವಿಠೋಬಾ ಧರಿ, ಸಂಜುಕುಮಾರ ಗಡಿಗೌಡಗಾಂವ, ವಿಠ್ಠಲ್ ಮುಚಳಂಬೆ ಸೇರಿ ಹುಮನಾಬಾದ್ ಹಾಗೂ ಬೀದರ್ ಜಿಲ್ಲೆಯ ವಿವಿಧೆಡೆ ಒಂಬತ್ತು ಬೈಕ್ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಪರಾಧ ವಿಭಾಗದ ಪಿಎಸ್ಐ ಸುರೇಶ ಹಜ್ಜಗರ್ಿ, ಪಿಎಸ್ಐ ಮಂಜನಗೌಡ ಪಾಟೀಲ್, ಸಿಬ್ಬಂದಿ ಮಲ್ಲಪ್ಪ, ಭಗವಾನ, ಶಿವಾನಂದ, ಸೂರ್ಯಕಾಂತ, ಬಾಲಾಜಿ, ರಾಜಶೇಖರ, ವಿವೇಕ ಅವರನ್ನು ಒಳಗೊಂಡ ತಂಡದ ಕಾಯರ್ಾಚರಣೆಗೆ ಎಸ್ಪಿ ಕಿಶೋರಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts