More

    ಕೊನೇ ದಿನ 19 ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆ

    ಚಿತ್ರದುರ್ಗ: ಚಿತ್ರದುರ್ಗ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಗುರುವಾರ ದಂದು 19 ಅಭ್ಯರ್ಥಿಗಳಿಂದ 22 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
    ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 3,ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು 2 ನಾಮಪತ್ರ ಸಲ್ಲಿಸಿದ್ದಾರೆ. ಕ ರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಬಿ.ವೆಂಕಟೇಶ್,ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಟಿ.ರಮೇಶ್‌ನಾಯ್ಕ,ಪಕ್ಷೇತರ ಅಭ್ಯ ರ್ಥಿಗಳಾದ ಗಣೇಶ್,ತಿಮ್ಮಯ್ಯ,ವಿ.ಎಸ್.ಮಂಜುನಾಥ,ಎಚ್.ತುಳಸಿ,ಆರ್.ದಾಸಪ್ಪ,ನಾಗರಾಜಪ್ಪ,ವಿ.ಎಸ್.ಭೂತರಾಜ,ಆರ್.ಸುಧಾ ಕರ, ಟಿ.ಗೋವಿಂದನಾಯ್ಕ,ಕೆ.ಶಿವಲಿಂಗಪ್ಪ,ಎಂ.ಇ.ಸುಜಾತ,ಟಿ.ಮಂಜುನಾಥಸ್ವಾಮಿ,ಎಂ.ಪಿ.ದಾರಕೇಶ್ವರಯ್ಯ, ಅಮೃತ್‌ರಾಜ, ಎಸ್.ಎಚ್.ಶ್ರೀನಿವಾಸ ಅವರು ತಲಾ ಒಂದೊಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಒಟ್ಟು 28 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ ಯಾಗಿವೆ. ಏ.5ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts