More

    ಕೆಸರಿನಲ್ಲಿ ಸಿಲುಕಿದ್ದ ಹಸು ರಕ್ಷಣೆ

    ಗೋಣಿಕೊಪ್ಪ: ಕೆಸರಿನಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸುವ ಮೂಲಕ 12 ವರ್ಷದ ಬಾಲಕ ಮಾನವೀಯತೆ ಮೆರೆದಿದ್ದಾನೆ.


    ತಿತಿಮತಿ ಸಮೀಪದ ಚೇನಿಹಡ್ಲು ಹಾಡಿ ನಿವಾಸಿ ದಿನೇಶ್ ಎಂಬುವರ ಪುತ್ರ ಅರ್ಜುನ ಸಾಗರ್ ಹಸುವನ್ನು ರಕ್ಷಿಸಿದ ಬಾಲಕ. ಸೋಮವಾರ ಚೇನಿಹಡ್ಲು ಹಾಡಿ ಬಳಿ ಮೇಯಲು ಬಿಟ್ಟಿದ್ದ ಸಂದರ್ಭ ಹಸುವೊಂದು ಆಕಸ್ಮಿಕವಾಗಿ ಗದ್ದೆಯಲ್ಲಿರುವ ಕೆಸರಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಸಿಲುಕಿತ್ತು. ಇದನ್ನು ಗಮನಿಸಿದ ಬಾಲಕ ಅರ್ಜುನ ಸಾಗರ್ ಸ್ನೇಹಿತರ ಸಹಾಯ ಪಡೆದು ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಕೆಸರಿನಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾನೆ.

    ಕಾರ್ಯಾಚರಣೆ ಸಂದರ್ಭ ಹಸುವಿನ ಬಾಯಿಗೆ ಹುಲ್ಲು ನೀಡಿ ಹಸಿವು ನೀಗಿಸುವ ಪ್ರಯತ್ನ ನಡೆಸಿ ಸೈ ಎನಿಸಿಕೊಂಡಿದ್ದಾನೆ. ಹಸು ಆರೋಗ್ಯವಾಗಿದೆ. ಈ ಹಸು ತಿತಿಮತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts