ಕೊಳ್ಳೇಗಾಲ: ಕಲ್ಲುಕ್ವಾರೆ ಹಳ್ಳದ ನೀರಿಗೆ ಕಾಲುಜಾರಿ ವೃದ್ಧೆಯೊಬ್ಬರು ಬಿದ್ದು ಮೃತಪಟ್ಟಿದ್ದಾರೆ.
ಕುಂತೂರು ಗ್ರಾಮದ ಶಿವಮ್ಮ(75) ಮೃತರು. ಈಕೆ ಕುಂತೂರು ಗ್ರಾಮದ ಹೊರ ವಲಯದಲ್ಲಿರುವ ಶ್ರೀಪ್ರಭುಲಿಂಗೇಶ್ವರಸ್ವಾಮಿ ಬೆಟ್ಟದಲ್ಲಿನ ಕಲ್ಲು ಕ್ವಾರೆ ಹಳ್ಳದಲ್ಲಿ ನಿಂತಿದ್ದ ನೀರಿಗೆ ಕಾಲುಜಾರಿ ಬಿದ್ದು ಸಾವಿಗೀಡಾಗಿದ್ದಾರೆ.
ಈ ಬಗ್ಗೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮೇಲೆತ್ತಿಸಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ತಂದಿರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.