More

    ಕರೊನಾ ಹೆಸರಲ್ಲಿ ಬಿಜೆಪಿ ಲೂಟಿ

    ಕಲಬುರಗಿ: ಕರೊನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಕರ್ಾರಗಳು ಸಂಪೂರ್ಣ ವಿಫಲವಾಗಿವೆ. ಕರೊನಾ ಹೆಸರಿನಲ್ಲಿ ಹಣವನ್ನು ಲೂಟಿ ಮಾಡುತ್ತಿವೆ ಎಂದು ಮಾಜಿ ಶಾಸಕ ಅಲ್ಲಂಪ್ರಭು ಪಾಟೀಲಸ್ ನೆಲೋಗಿ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ಮೂಲಗೆ ಗಂಭೀರವಾಗಿ ಆರೋಪಿಸಿದರು.
    ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಆರೋಗ್ಯ ಹಸ್ತ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಜನರು ಸಂಕಷ್ಟದಲ್ಲಿದ್ದರೂ ಸ್ಪಂದಿಸುತ್ತಿಲ್ಲ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ನಡುವಿನ ಮುಸುಕಿನ ಗುದ್ದಾಟಕ್ಕೆ ತೇಪೆ ಹಚ್ಚಲು ಮುಂದಾಗಿ ಎರಡು ಖಾತೆಗಳನ್ನು ಒಬ್ಬರಿಗೆ ವಹಿಸಿಕೊಡಲಾಗಿದೆ. ಈ ಕೆಲಸ ಹಿಂದೆ ಮಾಡಿದ್ದರೆ, ಒಂದಿಷ್ಟು ನಿಯಂತ್ರಣಕ್ಕೆ ಬರುಬಹುತ್ತಿತ್ತು ಎಂದರು.
    ಕಾಂಗ್ರೆಸ್ ಕಾರ್ಯಕರ್ತರನ್ನು ಕರೊನಾ ವಾರಿಯರ್ಸ್ ಆಗಿ ನೇಮಿಸಿ, ಕಿಟ್ ವಿತರಣೆ ಮಾಡಲಾಗಿದ್ದು, ಪ್ರತಿ ವಾಡರ್್ಗೆ ಇಬ್ಬರು ಕರೊನಾ ಕಾಂಗ್ರೆಸ್ ವಾರಿಯರ್ಸ್ಗಳು ಕೆಲಸ ಮಾಡಲಿದ್ದು, ಮನೆ-ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುವರು ಎಂದು ಬ್ಲಾಕ್ ಅದ್ಯಕ್ಷ ನೀಲಕಂಠ ಮೂಲಗೆ ಹೇಳಿದರು. ಮಹಿಳಾ ಘಟಕ ಅಧ್ಯಕ್ಷೆ ಲತಾ ರಾಠೋಡ, ಪ್ರಮುಖರಾದ ಹುಲಿಗೆಪ್ಪ ಕನಕಗಿರಿ, ಸಂತೋಷ ಪಾಟೀಲ್ ದಣ್ಣೂರ, ಬಾಬುರಾವ ಜಹಾಗೀರದಾರ, ಲಾಲ್ಅಹ್ಮದ ಬಾಂಬೆಶೇಠ, ವಾಣಿಶ್ರೀ ಸಗರಕರ್, ಶೋಭಾ ಕಾಳೆ, ಧರ್ಮರಾಜ್, ಪರಮೇಶ್ವರ ಖಾನಾಪುರ, ಮೋದಿನ್ ಪಟೇಲ್, ಮೊದಲಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts