More

    ಕರೊನಾ ಮುನ್ಸೂಚನೆ ನೀಡಿದ್ದರು !


    ಬಾಬುರಾವ ಯಡ್ರಾಮಿ ಕಲಬುರಗಿ
    ವಿಶ್ವವನ್ನೇ ತಲ್ಲಣಗೊಳಿಸಿ ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕರೊನಾ ವೈರಸ್' ಬರುತ್ತದೆ ಎಂಬ ಮುನ್ಸೂಚನೆಯನ್ನು ಯಾನಗುಂದಿಯ ರೂಪರಹಿತ ಅಹಿಂಸಾ ವೀರಧರ್ಮಜ ಮಹಾಯೋಗಿನಿ ಮಾತೆ ಮಾಣಿಕೇಶ್ವರಿ ನೀಡಿದ್ದರೆ? ಹೌದು ಎನ್ನುತ್ತಾರೆ ಮಾತಾಜಿ ಆಪ್ತರು ಮತ್ತು ಭಕ್ತರು. ಚೀನಿಯ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುವ ಮೂಲಕ ಅಪಾರ ಜನರನ್ನು ಬಲಿ ಪಡೆಯುತ್ತಿದೆ. ಇಷ್ಟಕ್ಕೂ ಈ ಸೋಂಕಿಗೆ ನಿಖರವಾದ ಔಷಧವೇ ಇಲ್ಲ, ಇದರಿಂದಾಗಿ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇಂಥದರಲ್ಲಿ ಮಾತೆ ಮಾಣಿಕೇಶ್ವರಿ ಕೆಲ ತಿಂಗಳ ಹಿಂದಷ್ಟೆ ತಮ್ಮವರ ಮುಂದೆ ಹೇಳಿದ್ದರಂತೆ, ಔಷಧ ಇಲ್ಲದ ರೋಗ ಬರುತ್ತದೆ. ಜನರನ್ನು ಬಾಧಿಸುತ್ತದೆ. ಅದಕ್ಕೊಂದು ಪರಿಹಾರವೂ ಸಿಗಲಿದೆ. ಆದರೆ ಅದು ಕೆಲದಿನ ಸಂಚಲನ ಮೂಡಿಸಲಿದ್ದು, ಜನರು ವಿಚಲಿತರಾಗಲಿದ್ದಾರೆ ಎಂದು ನುಡಿದಿದ್ದರಂತೆ ! ಶನಿವಾರ ಶಿವೈಕ್ಯರಾಗಿ ಯಾನಾಗುಂದಿ ಮಾಣಿಕ್ಯಗಿರಿಯಲ್ಲಿ ಶಾಶ್ವತವಾಗಿ ಶಿವಧ್ಯಾನದಲ್ಲಿ ಲೀನರಾಗಿರುವ ಮಾಣಿಕೇಶ್ವರಿ ಅಮ್ಮನವರು,ಔಷಧ ಇಲ್ಲದ ರೋಗ’ ಬರುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಕರೊನಾ ವೈರಸ್ ಮುನ್ಸೂಚನೆ ನೀಡಿದ್ದರು ಎಂದು ಭಕ್ತರು ವಿಶ್ಲೇಷಿಸುತ್ತಿದ್ದಾರೆ. ಇದನ್ನು ಮಾಣಿಕ್ಯಗಿರಿ ಟ್ರಸ್ಟ್ ಕಾರ್ಯದಶರ್ಿ ಶಿವಯ್ಯ ಸ್ವಾಮಿ ಖಚಿತಪಡಿಸಿದ್ದಾರೆ.
    ಕೆಲ ತಿಂಗಳ ಹಿಂದೆ ನಾನು ಅಮ್ಮನವರ ಸೇವೆಯಲ್ಲಿ ತೊಡಗಿದ್ದಾಗ ಕೆಲವೇ ದಿನಗಳಲ್ಲಿ ಔಷಧ ಇಲ್ಲದ ಜಡ್ಡು ಬರುತ್ತದೆ ಎಂದಿದ್ದರು. ಅದಕ್ಕೆ ಆ ಶಿವನೇ ಪರಿಹಾರ ತೋರಿಸುತ್ತಾನೆ ಎಂದು ಹೇಳಿದ್ದರು ಎಂದು ಶಿವಯ್ಯ ಹೇಳುತ್ತಾರೆ.
    ಮದ್ದಿಲ್ಲದ ಈ ಮಹಾಮಾರಿ ಈಗ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಭಾರತವನ್ನೂ ಗಾಬರಿಗೊಳಿಸಲು ಹೊರಟಿದೆ. ರಾಜ್ಯದಲ್ಲಿ ನಾಲ್ಕು ಕರೊನಾ ವೈರಸ್ ಸೋಂಕಿತರಿದ್ದಾರೆ ಎಂದು ಸಕರ್ಾರ ಖಚಿತಪಡಿಸಿದೆ. ಇಂತಹ ಹೊತ್ತಿನಲ್ಲಿ ಮಾತಾಜಿ ಹೇಳಿದ್ದು ನಿಜವಾಗುತ್ತಿರುವಂತಿದೆ.

    ನಾಲ್ಕೈದು ತಿಂಗಳ ಹಿಂದೆ ಮಾತೆ ಮಾಣಿಕೇಶ್ವರಿ ಅವರು ಔಷಧ ಇಲ್ಲದ ಜಡ್ಡು ಬಂದು ಜನರನ್ನು ಕಾಡುತ್ತದೆ ಎಂದಿದ್ದರು. ಈಗ ಎಲ್ಲಡೆ ಕರೊನಾ ವೈರಸ್ ಹರಡಿ ಜನರನ್ನು ಮೆತ್ತಗಾಗಿಸಿದ್ದನ್ನು ನೋಡಿದರೆ ಇದೇ ರೋಗದ ಮುನ್ಸೂಚನೆಯನ್ನು ಮಾತಾಜಿ ನೀಡಿದ್ದರು ಅನ್ನಿಸುತ್ತಿದೆ.
    | ಶಿವಯ್ಯ ಸ್ವಾಮಿ
    ಮಾತೆ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದಶರ್ಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts