More

    ಒಂಟೆಗಳ ರಕ್ಷಿಸಿ ತವರಿಗೆ ಸಾಗಣೆ

    ಬೆಳಗಾವಿ: ಮನರಂಜನೆಗಾಗಿ ಬೆಳಗಾವಿಗೆ ಕರೆತಂದಿದ್ದ 7 ಒಂಟೆಗಳು, ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ಆಹಾರ-ನೀರು ಇಲ್ಲದೆ ಪರದಾಡುತ್ತಿದ್ದವು. ಸುದ್ದಿ ತಿಳಿದ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರು, ಒಂಟೆಗಳಿದ್ದ ಹಿಂಡಾಲ್ಕೋ ಓವರ್ ಬ್ರಿಡ್ಜ್ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿದ್ದಾರೆ. ಮಾಲೀಕರು ಒಂಟೆಗಳನ್ನು ಸಾಕಲಾಗದೆ ಪರದಾಡುತ್ತಿದ್ದರು. ಈ ಪೈಕಿ 1 ಒಂಟೆ ಹಸಿವಿನಿಂದ ಈ ಹಿಂದೆಯೇ ಪ್ರಾಣ ಬಿಟ್ಟಿದೆ. ಇನ್ನುಳಿದ 6 ಒಂಟೆಗಳನ್ನು ರಕ್ಷಣೆ ಮಾಡಿ, ಜಿಲ್ಲಾಡಳಿತ ಹಾಗೂ ಬಿಎಆರ್‌ಸಿ (ಬೆಳಗಾವಿ ಅನಿಮಲ್ ರೆಸ್ಕೂೃ ಆ್ಯಂಡ್ ಕೇರ್) ಎನ್‌ಜಿಒ ಸಹಾಯದಿಂದ ತವರೂರಾದ ಮಧ್ಯಪ್ರದೇಶಕ್ಕೆ ಎರಡು ಟ್ರಕ್‌ನಲ್ಲಿ ಸಾಗಿಸಿದ್ದಾರೆ. ಈ ವೇಳೆ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಹಾಗೂ ರೋಹನ್ ರಜಪೂತ, ಅಕ್ಷಯ ದೇಶಪಾಂಡೆ, ರಾಜು ಖುಬ್ಜಿ, ಅಬ್ದುಲ್ ಶೇಖ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts