ಚಿತ್ರದುರ್ಗ: ಚಿಕ್ಕಮಗಳೂರು-ಚಿತ್ರದುರ್ಗ ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಹೋರಾಟ ಮಾಡುವವರ ಪೈಕಿ, ಗೋವಿಂದ ಎಂ ಕಾರಜೋಳ ಕೂಡಾ ಒಬ್ಬರು. ಹೀಗಾಗಿ ಅವರಿಗೆ ಬೆಂಬಲಿಸುತ್ತೇನೆ. ತುಮಕೂರು ಕ್ಷೇತ್ರದ ಕುರಿತು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.