More

    ಈ ಸಲ ಅದ್ದೂರಿ ಸುತ್ತೂರು ಜಾತ್ರೆ

    ಮೈಸೂರು: ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಮುಂದಿನ ಜನವರಿ 18ರಿಂದ 23ರ ವರೆಗೆ ಶ್ರೀಸುತ್ತೂರು ಕ್ಷೇತ್ರದಲ್ಲಿ ನೆರವೇರಲಿದೆ.


    ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷ ಜಾತ್ರಾ ಮಹೋತ್ಸವ ಪೂಜಾ ಕೈಕಂರ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಈ ವರ್ಷ ಎಂದಿನಂತೆ ಎಲ ್ಲ ಧಾರ್ಮಿಕ ಪೂಜಾವಿಧಿ ವಿಧಾನಗಳು, ಉತ್ಸವಗಳು, ಮೇಳಗಳು, ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.


    ಮಠಾಧೀಶರು, ಗಣ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದಿನಂತೆ ಪ್ರಸಾದ, ವಸತಿ, ಇತ್ಯಾದಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತಾದಿ ಹಾಗೂ ಸಾರ್ವಜನಿಕರು ಎಂದಿನಂತೆ ಭಾಗವಹಿಸಿ ಶ್ರೀಗುರುಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ ಎಂದು ಮಠದ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts