More

    ಆರೋಗ್ಯ ಶಿಬಿರದ ಲಾಭ ಪಡೆಯಿರಿ

    ಯರಗಟ್ಟಿ: ಆರೋಗ್ಯ ತಪಾಸಣೆ ಉಚಿತ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ಸಂಜೀವಕುಮಾರ ನವಲಗುಂದ ಹೇಳಿದರು.
    ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಸಮುದಾಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿನ ಜನರಿಗೆ ಹೃದಯ, ನರರೋಗ, ಕ್ಯಾನ್ಸರ್ ಸೇರಿ ಇತರ ದೀರ್ಘ ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆಯ ಸಹಕಾರದೊಂದಿಗೆ ಸಂಪೂರ್ಣ ಉಚಿತವಾಗಿ ಮಾಡಿಸಲು ತಮ್ಮ ತಂಡ ಸನ್ನದ್ಧವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿಂದ ವಂಚಿತರಾಗಬಾರದು ಮತ್ತು ಐಎಎಸ್, ಕೆಎಎಸ್‌ನಂತಹ ಪರೀಕ್ಷೆ ತರಬೇತಿಯನ್ನು ಉಚಿತವಾಗಿ ಕೊಡಿಸಲು ಉದ್ದೇಶಿಸಿವೆ ಎಂದರು.

    ಮುಖಂಡ ಅಶೋಕ ಹಾದಿಮನಿ ಮಾತನಾಡಿ, ಸಂಜೀವಕುಮಾರ ಅವರು ಸ್ನೇಹಿತರ ಬಳಗದೊಂದಿಗೆ ಸಮಾಜ ಸೇವೆಗೆ ಇಳಿದಿರುವುದು ಪ್ರಶಂಸನೀಯ ಎಂದರು. 516 ಸದಸ್ಯರು ವಿವಿಧ ಕಾಯಿಲೆ ತಪಾಸಣೆಗೆ ಹೆಸರು ನೋಂದಾಯಿಸಿಕೊಂಡರು. ಭಾಗೋಜಿಕೊಪ್ಪದ ಮುರುಘರಾಜೇಂದ್ರ ಸ್ವಾಮೀಜಿ, ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಕೋರಕೊಪ್ಪದ ರೇವಣಸಿದ್ದೇಶ್ವರ ಸ್ವಾಮೀಜಿ, ಉಮೇಶ ಬಾಳಿ, ಸುನೀಲ ಸುಳ್ಳದ, ಮನೋಹರ ಶೆಟ್ಟರ, ಪ್ರಕಾಶ ನರಿ, ಇಮ್ತಾಜ್ ಖಾದ್ರಿ, ಮುದಕಣ್ಣ ರವಿ, ಸಿದ್ದಲಿಂಗೇಶ ಸುಭೇದಾರ, ರಾಜು ಪಟ್ಟಣಶೆಟ್ಟಿ, ಶಿವಲಿಂಗಪ್ಪ ನವಲಗುಂದ, ಸುನೀತಾ ನವಲಗುಂದ, ಸುಭಾಷ ಬಸಳಿಗುಂದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts